ತಾವು ದಶಕಗಳಿಂದ ಕೂಡಿಟ್ಟಿದ್ದ ಹಣ, ಇಂದು ಚಾಲನೆಯಲ್ಲಿ ಇಲ್ಲ ಎನ್ನುವುದನ್ನು ತಿಳಿದ ಇಬ್ಬರು ಸಹೋದರಿಯರು ಆಘಾತಕ್ಕೊಳಗಾಗಿದ್ದಾರೆ. ಆದರೆ, ಶುಕ್ರವಾರ ಅವರಿಗೆ ತುಸು ಸಮಾಧಾನ ದೊರಕಿದೆ. ತಿರುಪ್ಪುರ ಜಿಲ್ಲೆಯ ಜಿಲ್ಲಾಧಿಕಾರಿ ಇಬ್ಬರಿಗೂ ₹1 ಸಾವಿರ ಮಾಸಾಶನ ಹಾಗೂ ಉಚಿತ ವೈದ್ಯಕೀಯ ಚಿಕಿತ್ಸೆಯ ಆದೇಶ ನೀಡಿದ್ದಾರೆ.