‘ನಮಗೆ ಅನುಮತಿ ಸಿಗುವುದಿಲ್ಲ ಎಂಬುದು ಹಿಂದಿನ ಅನುಭವಗಳಿಂದ ಗೊತ್ತಿತ್ತು. ಅದಕ್ಕಾಗಿಯೇ ಒಂದು ತಿಂಗಳು ಮುಂಚೆಯೇ ಪೊಲೀಸ್ ಇಲಾಖೆಯ ಅನುಮತಿಗಾಗಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆವು. ಇಷ್ಟು ದಿನ ಸುಮ್ಮನಿದ್ದ ಸರ್ಕಾರ, ಕೊನೆ ಗಳಿಗೆಯಲ್ಲಿ ಅನುಮತಿ ನಿರಾಕರಿಸಿದೆ’ ಎಂದು ಆಪಾದಿಸಿದರು. ‘ನಮ್ಮ ರ್ಯಾಲಿ ತಡೆಯಲು ಅವರ್ಯಾರು? ಈ ವಿಷಯದ ಬಗ್ಗೆ ಗೊಂದಲ ಸೃಷ್ಟಿಸಿ, ಅಹಿತಕರ ಪರಿಸ್ಥಿತಿ ಉಂಟು ಮಾಡಿ ಆ ಆರೋಪವನ್ನು ನಮ್ಮ ಮೇಲೆ ಹಾಕುವುದುಟಿಎಂಸಿ ಉದ್ದೇಶ. ಆದರೆ, ನಾವು ಅವರ ಬಲೆಗೆ ಬೀಳುವುದಿಲ್ಲ’ ಎಂದರು.