ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳ; ಹಿಂಸೆಗೆ ಮತ್ತೊಂದು ಬಲಿ

Last Updated 16 ಜೂನ್ 2019, 20:32 IST
ಅಕ್ಷರ ಗಾತ್ರ

ಕಲ್ಯಾಣಿ (ಪಶ್ಚಿಮ ಬಂಗಾಳ): ರಾಜ್ಯದ ಹೂಗ್ಲಿ ಜಿಲ್ಲೆಯ ಖನಕುಲ್‌ನಲ್ಲಿ ಬ್ಲಾಕ್‌ ಪಂಚಾಯಿತಿ ಸಮಿತಿಯ ಟಿಎಂಸಿ ಸದಸ್ಯ ಮನೋರಂಜನ್ ಪಾತ್ರಾ ಅವರ ಮೇಲೆ ಗುಂಪೊಂದು ಹಲ್ಲೆ ನಡೆಸಿ ಹತ್ಯೆ ಮಾಡಿದೆ. ಪಕ್ಷದ ಕಚೇರಿ ಎದುರು ಕುಳಿತಿದ್ದ ಅವರ ಮೇಲೆ ಗುಂಪು ಕಬ್ಬಿಣದ ಸರಳಿನಿಂದ ಹಲ್ಲೆ ಮಾಡಿದೆ.

ಘಟನೆ ಸಂಬಂಧ ಎಂಟು ಜನರನ್ನು ಬಂಧಿಸಲಾಗಿದೆ, ಅವರಲ್ಲಿ ಮೂವರು ಬಿಜೆಪಿ ಬೆಂಬಲಿಗರು ಸೇರಿದ್ದಾರೆ ಎಂದು ಹೂಗ್ಲಿ (ಗ್ರಾಮೀಣ) ಪೊಲೀಸ್‌ ವರಿಷ್ಠಾಧಿಕಾರಿ ಸುಖೇಂದ್ರು ಹಿರಾ ಸುದ್ದಿಗಾರರಿಗೆ ತಿಳಿಸಿದರು.

ಈ ಮೊದಲು ಸಿಪಿಎಂ ಜೊತೆಗೆ ಗುರುತಿಸಿಕೊಂಡಿದ್ದ, ಈಗ ಬಿಜೆಪಿಯ ಬೆಂಬಲಿಗರಾಗಿರುವವರು ಹಲ್ಲೆ ನಡೆಸಿದ್ದಾರೆ ಎಂದು ಟಿಎಂಸಿ ಸಂಸದ, ಪಕ್ಷದ ಯುವಘಟಕದ ನಾಯಕ ಅಭಿಷೇಕ್‌ ಬ್ಯಾನರ್ಜಿ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT