ಮಂಡ್ಯ: ‘ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ₹600 ಕೋಟಿ ನಷ್ಟದಲ್ಲಿದ್ದು, 2,600 ಹುದ್ದೆಗಳು ಖಾಲಿ ಇವೆ. ಮೂರು ವರ್ಷ ಅವಕಾಶ ದೊರೆತರೆ ಸಂಸ್ಥೆಯನ್ನು ಲಾಭದತ್ತ ಕೊಂಡೊಯ್ಯಲಾಗುವುದು’ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಇಲ್ಲಿ ಸೋಮವಾರ ಹೇಳಿದರು.
ನಗರದ ಬಸ್ ಡಿಪೊ ಆವರಣದಲ್ಲಿ ನಡೆದ ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕ ಪ್ರದಾನ ಮಾಡಿ ಮಾತನಾಡಿದರು.