‘ಲಾಯರ್ಸ್ ಫಾರ್ ನೇಷನ್’ ಸಂಸ್ಥೆಯು ನಗರದಲ್ಲಿ ಶುಕ್ರವಾರ ‘ಪೌರತ್ವ ತಿದ್ದುಪಡಿ ಕಾಯ್ದೆ ಪ್ರಚಾರ ಮತ್ತು ವಾಸ್ತವ’ ಕುರಿತು ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿದ ಅವರು, ‘ಉತ್ತರ ಭಾರತದ ಕೆಲವು ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಿರಬಹುದು. ದಕ್ಷಿಣ ಭಾರತದ ಮುಸ್ಲಿಮರು ಇಲ್ಲಿಯೇ ಹುಟ್ಟಿ, ಇಲ್ಲಿಯೇ ಬೆಳೆದವರು. ಮಹಮ್ಮದ್ ಅಲಿ ಜಿನ್ನಾ ಇಲ್ಲಿನ ಮುಸ್ಲಿಮರಿಗೆ ಪಾಕಿಸ್ತಾನಕ್ಕೆ ಬರುವಂತೆ ಆಹ್ವಾನಿಸಿದಾಗ, ಇಲ್ಲಿರುವ ಮುಸ್ಲಿಮರು ಈ ದೇಶ ನಮ್ಮದು. ಇದು ನಮಗೆ ಅನ್ನ ಕೊಟ್ಟಿದೆ. ಇಲ್ಲಿಯೇ ಇರುತ್ತೇವೆ, ಇಲ್ಲಿಯೇ ಸಾಯುತ್ತೇವೆ ಎಂಬುದಾಗಿ ಹೇಳಿದ್ದರು’ ಎಂದರು.