ಎಲ್ಲೆಲ್ಲಿ ಶೋಧ: ನಾರಾಯಣ ಸ್ವಾಮಿ ಅವರ ಬೆಂಗಳೂರು ಜಯನಗರದಲ್ಲಿರುವ ವಾಸದ ಮನೆ, ಸಂಬಂಧಿಕರಿಗೆ ಸೇರಿದ ವಿನಾಯಕ ನಗರ ಮೇಡನಹಳ್ಳಿಯ ಮನೆ, ಕೋಲಾರದ ಎರಡು ಮನೆಗಳು, ಚಿಂತಾಮಣಿ ತಾಲ್ಲೂಕಿನಲ್ಲಿರುವ ಮನೆ ಮತ್ತು ಶಾಂತಿನಗರದಲ್ಲಿರುವ ಕಚೇರಿ; ಶಿವಶಂಕರ್ ಅವರ ರಾಮನಗರ ಅರ್ಕಾವತಿ ಬಡಾವಣೆ ನಿವಾಸ, ಸಂಬಂಧಿಕರಿಗೆ ಸೇರಿದದೊಡ್ಡಬಳ್ಳಾಪುರದ ಮನೆ, ರಾಮನಗರದ ಬಮೂಲ್ ಕಚೇರಿ; ಅರ್ಷದ್ ಪಾಷಾ ಅವರಿಗೆ ಸೇರಿದ ಮೈಸೂರು ಉದಯಗಿರಿಯಲ್ಲಿರುವ ಮನೆ, ಪಂಚಾಯತ್ ರಾಜ್ ಇಲಾಖೆ ಕಚೇರಿ, ಪಿರಿಯಾಪಟ್ಟಣ; ಚನ್ನೇಗೌಡರ ಅವರಿಗೆ ಸೇರಿರುವ ಹೇಮಾವತಿ ನಗರದ (ಹಾಸನ) ಮನೆ, ಹಾಸನದ ಸಂಬಂಧಿಕರ ಮನೆ ಮತ್ತು ಹಾಸನ ಪಿಡಬ್ಲ್ಯುಡಿ ಕಚೇರಿಗಳಲ್ಲಿ ಶೋಧ ನಡೆಸಲಾಗಿದೆ. ದಾಳಿ ವೇಳೆ ಮನೆ, ನಿವೇಶನ, ಜಮೀನು, ಹಣ– ಆಭರಣ ಹಾಗೂ ವಾಹನಗಳು ಪತ್ತೆಯಾಗಿವೆ. ಅನೇಕ ಮಹತ್ವದ ದಾಖಲೆಗಳು ಸಿಕ್ಕಿದ್ದು ಪರಿಶೀಲನೆ ನಡೆಯುತ್ತಿದೆ.