ವಿಟ್ಲ: ಬಂಟ್ವಾಳ ತಾಲೂಕು ಸಾಲೆತ್ತೂರು ಪಾಲ್ತಾಜೆ ನಿವಾಸಿ ದೇವಪ್ಪ ಯಾನೆ ದೇವರಾಜ್ ಪಾಲ್ತಾಜೆ (58) ಅವರು ಅಲ್ಪಕಾಲದ ಅನಾರೋಗ್ಯದಿಂದ ಭಾನುವಾರ ಬೆಂಗಳೂರಿನಲ್ಲಿ ನಿಧನರಾದರು.
ಪತ್ನಿ, ಪುತ್ರಿ ನಟಿ ರಾಧಿಕಾ ಕುಮಾರಸ್ವಾಮಿ ಹಾಗೂ ಪುತ್ರ ರವಿರಾಜ್ ಇದ್ದಾರೆ. ಅಮ್ಟೂರು ಹಾಗೂ ಸಾಲೆತ್ತೂರಿನಲ್ಲಿ ಅವರಿಗೆ ಕೃಷಿ ಜಮೀನಿದ್ದು, ಸಾಲೆತ್ತೂರಿನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ .