ತಾಲ್ಲೂಕಿನ ನದಿಇಂಗಳಗಾಂವದಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಭಸ್ಮಾಸುರ ಎನ್ನುವವನಿದ್ದ. ಆತ ಕೈ ಇಟ್ಟಲ್ಲೆಲ್ಲಾ ಸುಟ್ಟು ಹೋಗುತ್ತಿತ್ತಂತೆ. ಕೊನೆಗೆ ಆತ ತನ್ನ ತಲೆ ಮೇಲೆಯೇ ಕೈ ಇಟ್ಟುಕೊಂಡನಂತೆ’ ಎಂದು ಉದಾಹರಿಸಿದರು. ಆದರೆ, ಯಾರಿಗೆ ಆ ಮಾತು ಅನ್ವಯಿಸುತ್ತದೆ ಎನ್ನುವುದನ್ನು ಖಚಿತವಾಗಿ ಹೇಳಲು ನಿರಾಕರಿಸಿದರು.