ಮುಗಿಲು ಮುಟ್ಟುವ ಜಯಕಾರದ ಜತೆಗೇ ಮೃತದೇಹ ಕಂಡು 'ಅಣ್ಣಾ... ನಮ್ಮನ್ನು ಬಿಟ್ಬುಟ್ಟು ಹೋಗ್ಬಿಟ್ಯಲ್ಲಾ... ಅಣ್ಣಾ...' ಎಂಬ ರೋದನವೂ ಕೇಳಿಸುತ್ತಿದೆ. 'ಕುಮಾರಣ್ಣಾ, ನಮ್ ಮಂಡ್ಯಕ್ಕೆ ಅಂಬರೀಶಣ್ಣನ ಕರ್ಕಬರಲೇಬೇಕು... ಇಲ್ಲಾಂದ್ರೆ ಸುಮ್ನಿರಾಕಿಲ್ಲ' ಎಂದು ಅಂಬಿ ಅಭಿಮಾನಿ ಎಂದು ಬರೆದುಕೊಂಡಿದ್ದ ಟಿ ಷರ್ಟ್ ತೊಟ್ಟ ಹುಡುಗ, ಮುಖ್ಯಮಂತ್ರಿಯತ್ತ ಕೈತೋರಿಸಿ ಕಿರುಚುತ್ತಿದ್ದ.