ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ ಅಧಿವೇಶನ: ಬಿಜೆಪಿ ಶಾಸಕರ ಗದ್ದಲ, ರಾಜ್ಯಪಾಲರ ಭಾಷಣ ಮೊಟಕು

Last Updated 6 ಫೆಬ್ರುವರಿ 2019, 7:44 IST
ಅಕ್ಷರ ಗಾತ್ರ

ಬೆಂಗಳೂರು:ಬುಧವಾರ ಆರಂಭವಾದಬಜೆಟ್‌ ಅಧಿವೇಶನ ವೇಳೆ ರಾಜ್ಯಪಾಲರ ಭಾಷಣ ಆರಂಭವಾದ ಕೆಲಹೊತ್ತಿನಲ್ಲೇ ಬಿಜೆಪಿ ಶಾಸಕರು ಗದ್ದಲ ಆರಂಭಿಸಿದರು. ‘ಬಹುಮತವಿಲ್ಲದ ಸರ್ಕಾರದಿಂದ ಬಜೆಟ್‌ ಅಧಿವೇಶನ’ ಎಂಬ ಘೋಷಣೆಗಳನ್ನು ಕೂಗಿದ ಬಿಜೆಪಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದರು.

ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ, ‘ಸಮ್ಮಿಶ್ರ ಸರ್ಕಾರವು ರಾಜ್ಯಪಾಲರಿಂದ ಸುಳ್ಳುಗಳ ರಾಶಿಯನ್ನೇ ಓದಿಸುತ್ತಿದೆ. ಎಲ್ಲಿದೆ ಸರ್ಕಾರ’ ಎಂದು ಪ್ರಶ್ನಿಸಿದರು. ಇದರೊಂದಿಗೆ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದರು. ರಾಜ್ಯಪಾಲರು ಮನವಿ ಮಾಡಿಕೊಂಡರೂ ಬಿಜೆಪಿ ನಾಯಕರು ಕಿವಿಗೊಡಲಿಲ್ಲ.

ಗದ್ದಲದ ನಡುವೆಯೂ ಭಾಷಣ ಮುಂದುವರಿಸಿದರಾಜ್ಯಪಾಲ ವಾಜುಭಾಯ್‌ ವಾಲಾ 22 ಎರಡು ಪುಟಗಳ ತಮ್ಮ ಭಾಷಣವನ್ನು ಕೇವಲ‌ ಎರಡು ಪುಟಗಳಿಗೆ ಮೊಟಕು ಗೊಳಿಸಿದರು.

ಇತ್ತೀಚೆಗೆ ನಿಧನರಾದಕರ್ನಾಟಕ ರತ್ನ ಶಿವಕುಮಾರ ಸ್ವಾಮೀಜಿ ಹಾಗೂಮಾಜಿ ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್‌ ಅವರಿಗೆ ಸಭಾಪತಿ ರಮೇಶ್‌ ಕುಮಾರ್‌ ಸಂತಾಪ ನಿಲುವಳಿ ಓದುವ ವೇಳೆಯೂ ಬಿಜೆಪಿ ಶಾಸಕರಗದ್ದಲ ಮುಂದುವರಿಯಿತು.ಸಂತಾಪ ನಿಲುವಳಿ ವೇಳೆ ಶಾಸಕರು ತಮ್ಮ ಸ್ಥಾನಗಳನ್ನು ಬಿಟ್ಟು ಓಡಾಡಬಾರದು ಎಂದು ಸೂಚಿಸಿದ ರಮೇಶ್‌ ಕುಮಾರ್‌, ನಾಯಕರ ವರ್ತನೆಗೆ ಗರಂ ಆದರು.

ಬಿಜೆಪಿ ನಾಯಕರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯೇ ಇಲ್ಲ. ಅವರಿಗೆ ಪ್ರಬುದ್ಧತೆ ಇಲ್ಲ.ಉದ್ದಟತನ ತೋರುವ ಕೆಲಸ ಮಾಡಿದ್ದಾರೆ ಎಂದು ಸಚಿವ ಸಿ.ಎಸ್‌.ಪುಟ್ಟರಾಜು ಅವರು ಕಿಡಿಕಾರಿದರು.

ಕಾಂಗ್ರೆಸ್‌ನ ಅತೃಪ್ತ ಶಾಸಕರಾದ ರಮೇಶ ಜಾರಕಿಹೊಳಿ, ಮಹೇಶ ಕುಮಟಳ್ಳಿ, ಬಿ. ನಾಗೇಂದ್ರ, ಉಮೇಶ ಜಾಧವ್ ಹಾಗೂಬಿಜೆಪಿಯ ಅಶ್ವಥ್‌ ನಾರಾಯಣ್‌, ಬಾಲಚಂದ್ರ ಜಾರಕಿಹೋಳಿ ಸೇರಿದಂತೆ ಒಟ್ಟು ಒಂಬತ್ತು ಶಾಸಕರು ಅಧಿವೇಶನಕ್ಕೆ ಗೈರಾಗಿದ್ದಾರೆ.

ಫೆಬ್ರುವರಿ 08ರಂದು(ಶುಕ್ರವಾರ) ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರದ ಎರಡನೇ ಬಜೆಟ್‌ ಮಂಡನೆಯಾಗಲಿದೆ.

ನನ್ನ ಆರೋಗ್ಯ ಸುಧಾರಿಸಿದೆ: ಆನಂದ್‌ ಸಿಂಗ್‌

ಬಿಡದಿಯ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ನಡೆದ ಗಲಾಟೆ ವೇಳೆ ಕಂಪ್ಲಿ ಶಾಸಕ ಗಣೇಶ್‌ ಅವರಿಂದ ಹಲ್ಲೆಗೊಳಗಾಗಿದ್ದಶಾಸಕ ಆನಂದ್‌ ಸಿಂಗ್‌ಅಧಿವೇಶನದಲ್ಲಿ ಭಾಗವಹಿಸಿದರು. ಅವರು ‘ನನ್ನ ಆರೋಗ್ಯ ಸುಧಾರಿಸಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT