ಧರಣಿ ನಡೆಸುತ್ತಿದ್ದ ಬಿಜೆಪಿ ಸದಸ್ಯರನ್ನು ಸ್ವಲ್ಪ ಹೊತ್ತು ಸುಮ್ಮನಿರುವಂತೆ ಮನವಿ ಮಾಡಿದರು. ಆಗ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ, ‘ಚರ್ಚೆ ನಡೆಯದೆ ಇರುವುದಕ್ಕೆ ಮೈತ್ರಿ ಸರ್ಕಾರವೇ ಕಾರಣ’ ಎಂದು ಕಿಡಿಕಾರಿದರು. ಆಗ ರಮೇಶ್ ಕುಮಾರ್, ‘ನಾನು ಇಲ್ಲಿ ಪಕ್ಷಾತೀತವಾಗಿ ಮಾತನಾಡುತ್ತಿದ್ದೇನೆ.
ಇದಕ್ಕೆ ಎಲ್ಲರೂ ಕಾರಣ’ ಎಂದು ಪ್ರತಿಪಾದಿಸಿದರು. ರೇಣುಕಾಚಾರ್ಯ ಘೋಷಣೆ ಕೂಗುವುದನ್ನು ಮುಂದುವರಿಸಿದರು. ಇದರಿಂದ ಕುಪಿತಗೊಂಡ ಸಭಾಧ್ಯಕ್ಷರು, ‘ಇವರಿಗೆ ಮ್ಯಾನರ್ಸ್ ಇಲ್ಲ. ಎಂತೆಂತಹ ವ್ಯಕ್ತಿಗಳನ್ನು ಶಾಸಕರಾಗಿ ಆಯ್ಕೆ ಮಾಡಿ ಕಳುಹಿಸುತ್ತಿದ್ದಾರೆ’ ಎಂದು ಹೇಳಿ ಮಾತು ಮೊಟಕುಗೊಳಿಸಿದರು. ‘ಇದು ರೈತ ವಿರೋಧಿ ಸರ್ಕಾರ. ಒಂದು ರಾಜ್ಯ, ಮೂವರು ಮುಖ್ಯಮಂತ್ರಿಗಳು’ ಎಂದು ಬಿಜೆಪಿ ಸದಸ್ಯರು ಘೋಷಣೆ ಕೂಗಿದರು.