‘ಬಡವರಿಂದ ದೂರ ಸಾಗುತ್ತಿರುವ ಬಂಧು’ ಶೀರ್ಷಿಕೆಯಡಿ‘ಪ್ರಜಾವಾಣಿ’ಯಲ್ಲಿ ಶುಕ್ರವಾರ ಪ್ರಕಟವಾದ ವರದಿಯನ್ನು ಟ್ವಿಟರ್ನಲ್ಲಿ ಹಂಚಿಕೊಂಡು ಸರಣಿ ಟ್ವೀಟ್ ಮಾಡಿರುವ ಅವರು, ‘ಅಶಕ್ತರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿದ್ದ ಈ ಯೋಜನೆಗೆ ಚೈತನ್ಯ ತುಂಬಿ, ಇಲ್ಲವೇ ಹೋರಾಟ ಎದುರಿಸಿ’ ಎಂದೂ ಎಚ್ಚರಿಸಿದ್ದಾರೆ.