ಗುಂಡ್ಲುಪೇಟೆ: ಕುಂದುಕೆರೆ ವಲಯದ ಕಣಿಯನಪುರ ಪ್ರದೇಶದಲ್ಲಿ ಗುರುವಾರ ಸಂಜೆ ಬೆಂಕಿ ಕಾಣಿಸಿಕೊಂಡಿದೆ. ಅರಣ್ಯ ಪ್ರದೇಶಕ್ಕೆ ವ್ಯಾಪಿಸುತ್ತಿದ್ದ ಬೆಂಕಿಯನ್ನು ಇಲಾಖೆ ಸಿಬ್ಬಂದಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಖಾಸಗಿ ಜಮೀನಿನಲ್ಲಿ ಬಿದ್ದ ಬೆಂಕಿಯು ಗಾಳಿ ರಭಸಕ್ಕೆ ಖಾರಾಪುರಕೆರೆ ಏಳ್ಕಂಡಿಹುಣಸೆ ಮರದ ಪ್ರದೇಶದವರೆಗೂ ವ್ಯಾಪಿಸಿತ್ತು. ಬಳಿಕ ಇಲಾಖೆಯವರು ಬೆಂಕಿಯನ್ನು ನಂದಿಸಿದರು ಎಂದು ಗ್ರಾಮಸ್ಥರು ತಿಳಿಸಿದರು.
‘ಅರಣ್ಯ ಪ್ರದೇಶಕ್ಕೆ ಹೆಚ್ಚು ಹಾನಿಯಾಗಿಲ್ಲ, ಹೆಚ್ಚಿನ ಅನಾಹುತವನ್ನು ಸಿಬ್ಬಂದಿ ತಪ್ಪಿಸಿದ್ದಾರೆ’ ಎಂದು ವಲಯ ಅರಣ್ಯಾಧಿಕಾರಿ ಮಂಜುನಾಥ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.