ಕುದೂರು (ಮಾಗಡಿ): ಕೂಡ್ಲೂರು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 75ರ ರಸ್ತೆಯಲ್ಲಿ ಮಧ್ಯಾಹ್ನಕಾರೊಂದು ವಿಭಜಕ ಹತ್ತಿ ಉರುಳಿಬಿದ್ದು ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ.
ಮೃತರನ್ನು ಬೆಂಗಳೂರು ಬನಶಂಕರಿ ನಿವಾಸಿಗಳಾದ ರತ್ನಮ್ಮ (65) ಮತ್ತು ಕಾರು ಚಾಲಕ ಜಹೀರ್ (27) ಎಂದು ಗುರುತಿಸಲಾಗಿದೆ. ರತ್ನಮ್ಮ ಅವರ
ಪತಿ, ಗಾಯಾಳು ರಂಗಸ್ವಾಮಿ ಅವರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ದಂಪತಿ ಕಾರಿನಲ್ಲಿ ಕುದೂರು ಬಳಿ ದೇವರ ದರ್ಶನಕ್ಕೆ ಬಂದು ಪೂಜೆ ಸಲ್ಲಿಸಿ ಹಿಂದಿರುಗುವಾಗ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದರು.