ಹೀಗಾಗಿ, ಯಡಿಯೂರಪ್ಪನವರ ‘ನಾಯಕತ್ವ’, ಚುನಾವಣೆಗೆ ನಡೆಸಿದ ಸಿದ್ಧತೆ, ಪ್ರಚಾರ ವೈಖರಿ, ಉಳಿದ ನಾಯಕರ ನಿರಾಸಕ್ತಿ, ನೀಡಿದ ಗೊಂದಲದ ಹೇಳಿಕೆಗಳು ಪಕ್ಷದೊಳಗೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ. ಉಪ ಚುನಾವಣೆಗಳ ಫಲಿತಾಂಶ ಹೊರಬೀಳುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರಲ್ಲಿ ನೋವು, ಬೇಸರ, ಆಕ್ರೋಶ ಕಾಣಿಸಿಕೊಂಡಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಈ ಪಕ್ಷದ ಸೋಲಿಗೆ ಕಾರಣ ಹುಡುಕುವ ಕೆಲಸ ನಡೆದಿತ್ತು.