ಬೆಂಗಳೂರು: ಜೆಡಿಎಸ್– ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆ ಮಾರ್ಚ್ 4ರಂದು ನಡೆಯಲಿದ್ದು, ಲೋಕಸಭೆ ಚುನಾವಣೆ ಸೀಟು ಹಂಚಿಕೆ ಕುರಿತು ಚರ್ಚೆ ನಡೆಯಲಿದೆ.
ಸೀಟು ಹಂಚಿಕೆ ಸಂಬಂಧ ಇತ್ತೀಚೆಗೆ ಉಭಯ ಪಕ್ಷಗಳ ಅಧ್ಯಕ್ಷರು, ಉಪ ಮುಖ್ಯಮಂತ್ರಿ ಮತ್ತು ಲೋಕೋಪಯೋಗಿ ಸಚಿವರು ಚರ್ಚೆ ನಡೆಸಿದ್ದರು. ಆದರೆ, ಯಾವುದೇ ತೀರ್ಮಾನಕ್ಕೆ ಬಂದಿರಲಿಲ್ಲ.
12 ಲೋಕಸಭೆ ಕ್ಷೇತ್ರಗಳಿಗೆ ಜೆಡಿಎಸ್ ಬೇಡಿಕೆ ಇಟ್ಟಿದೆ. ಆದರೆ, 2014ರಲ್ಲಿ ಪಕ್ಷ ಗೆದ್ದಿರುವ 10 ಕ್ಷೇತ್ರಗಳನ್ನು ಕೈಯಲ್ಲೇ ಉಳಿಸಿಕೊಳ್ಳಬೇಕೆಂಬುದು ಕಾಂಗ್ರೆಸ್ ನಿಲುವು. ಜೊತೆಗೆ ಗೆಲ್ಲುವುದೇ ಸೀಟು ಹಂಚಿಕೆಗೆ ಮಾನ ದಂಡ ಎಂದೂ ಪ್ರತಿಪಾದಿಸಿದೆ.