ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಾಗ್ಮಿ’ ಯಾರು?

Last Updated 2 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

‘ಮಾತಲ್ಲ, ಚಿಂತನೆ ಮುಖ್ಯ’ (ಶೂದ್ರ ಶ್ರೀನಿವಾಸ್, ವಾ.ವಾ., ಜ. 29), ‘ಬಡ ಬಡ ಮಾತಾಡುವುದೇ ಮಾತಿನ ಕಲೆಗಾರಿಕೆಯಲ್ಲ’ ಎಂಬ ಮಾತು ಚಿಂತನಾರ್ಹವಾಗಿದೆ. ಆದರೆ ಹಾಗೆ ‘ಬಡ ಬಡಿಸು’ವವರನ್ನೆ ‘ವಾಗ್ಮಿ’ಗಳೆಂದು ಲೋಕ ಪರಿಗಣಿಸುತ್ತದೆ!

ವಾಸ್ತವವಾಗಿ, ವಾಗ್ಮಿತೆಯ ಲಕ್ಷಣವೇನು? ‘ಮಿತಂ ಚ ಸಾರಂ ಚ ವಚೋ ಹಿ ವಾಗ್ಮಿತಾ’ (ಮಿತವಾದ, ಸಾರವತ್ತಾದ ಮಾತುಗಾರಿಕೆಯೇ ವಾಗ್ಮಿತೆ). ಈ ದೃಷ್ಟಿಯಿಂದ ಕುವೆಂಪು ವಾಗ್ಮಿಯಾಗಿದ್ದರು. ನಿರರ್ಗಳ ಮಾತುಗಾರರಲ್ಲದಿದ್ದರೂ.

‘ಮಾತಿನ ಕಲೆಗಾರಿಕೆ’, ಚಿಂತನೆಯ ಸೌಷ್ಠವ ಎರಡನ್ನೂ ಉಳ್ಳವರು ಶ್ರೇಷ್ಠ ವಾಗ್ಮಿಗಳಾಗುತ್ತಾರೆ. ಅಂಥವರು ವಿರಳ. ಬುಡುಬುಡುಕೆಯಂತೆ ಬಡ ಬಡ ಮಾತನಾಡುವವರು ವಾಚಾಳಿಗಳಷ್ಟೆ, ವಾಗ್ಮಿಗಳಲ್ಲ!

ಸಿ.ಪಿ.ಕೆ., ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT