ಕೆಲವು ಜಿಲ್ಲೆಗಳಲ್ಲಿ ಆಯಾ ಜಿಲ್ಲಾ ವ್ಯಾಪ್ತಿಯೊಳಗೆ ತರಕಾರಿ, ಹಣ್ಣು ಸಾಗಿಸಲು ಅವಕಾಶ ಕಲ್ಪಿಸಲಾಗಿದೆ. ರೈತರು ತಮ್ಮ ಜಿಲ್ಲೆಯ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಬೆಳೆಯುವುದಕ್ಕಿಂತ ತರಕಾರಿಯನ್ನೇ ಬೆಳೆಯದ ಜಿಲ್ಲೆಗಳ ಮಾರುಕಟ್ಟೆ ಅವಲಂಬಿಸಿದ್ದರು. ದಕ್ಷಿಣ
ಕನ್ನಡ, ಉಡುಪಿ ಜಿಲ್ಲೆಗಳಿಗೆ ಸಾಗಿಸಲು ಹಳೆ ಮೈಸೂರು ಭಾಗದ ರೈತರು ಪರದಾಡುವ ಪರಿಸ್ಥಿತಿ ಇದೆ. ಅಂತರರಾಜ್ಯ ಮಾರುಕಟ್ಟೆ ನಂಬಿ, ಹಣ್ಣು, ತರಕಾರಿ ಬೆಳೆದ ರೈತರು ಕಂಗಾಲಾಗಿದ್ದಾರೆ.