<p><strong>ಬೆಂಗಳೂರು:</strong> ಕೋವಿಡ್ ಹರಡುತ್ತಿರುವುದನ್ನು ನಿಯಂತ್ರಿಸಲು ಬೆಂಗಳೂರನ್ನು ಎಂಟು ವಲಯಗಳಾಗಿ ವಿಂಗಡಿಸಿ ಅವುಗಳ ಉಸ್ತುವಾರಿಯನ್ನು ಏಳು ಸಚಿವರು ಹಾಗೂ ಒಬ್ಬರು ರಾಜಕೀಯ ಕಾರ್ಯದರ್ಶಿಗೆ ವಹಿಸಲಾಗಿದೆ.</p>.<p>ಸೋಂಕು ಹೆಚ್ಚುತ್ತಿರುವ ಬಗ್ಗೆ ಸಚಿವಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಕೊರೊನಾ ಹಿಮ್ಮೆಟ್ಟಿಸಲು ಎಲ್ಲ ಸಚಿವರೂ ಗಂಭೀರವಾಗಿ ಕಾರ್ಯನಿರ್ಹಿಸಬೇಕೆಂದು ಮುಖ್ಯಮಂತ್ರಿ ಸೂಚಿಸಿರುವುದಾಗಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.</p>.<p>ರಾಜಧಾನಿಯಲ್ಲಿ ಕೋವಿಡ್ ಪಿಡುಗನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಚಿವರು, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಜತೆಗೆ ಐಎಎಸ್ ಅಧಿಕಾರಿಗಳನ್ನೂ ನೇಮಿಸಲಾಗಿದೆ. ಕಂಟೈನ್ಮೆಂಟ್ ವಲಯಗಳು ಸೇರಿ ಎಲ್ಲೆಡೆ ಬಿಗಿ ಕ್ರಮ, ಪರೀಕ್ಷೆಗಳ ಸಂಖ್ಯೆ ಹೆಚ್ಚಿಸುವುದು, ಚಿಕಿತ್ಸೆಗೆ ರೋಗಿಗಳ ಪರದಾಟ ತಪ್ಪಿಸುವ ಹೊಣೆ ಈ ಉಸ್ತುವಾರಿಗಳದ್ದಾಗಿದೆ.</p>.<p class="Subhead"><strong>ವಲಯಗಳ ಉಸ್ತುವಾರಿ: </strong>ಡಾ.ಸಿ.ಎನ್.ಅಶ್ವತ್ಥನಾರಾಯಣ, ಎಸ್.ಟಿ.ಸೋಮಶೇಖರ್, ಆರ್.ಅಶೋಕ,ಎಸ್.ಸುರೇಶ್ ಕುಮಾರ್, ಬೈರತಿ ಬಸವರಾಜ್, ಕೆ.ಗೋಪಾಲಯ್ಯ, ವಿ.ಸೋಮಣ್ಣ ಮತ್ತು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್.</p>.<p class="Subhead"><strong>ಐಎಎಸ್ ಅಧಿಕಾರಿಗಳು:</strong> ಬೆಂಗಳೂರು ಪೂರ್ವ– ತುಷಾರ್ ಗಿರಿನಾಥ್, ಪಶ್ಚಿಮ– ರಾಜೇಂದ್ರ ಕುಮಾರ್ ಕಟಾರಿಯಾ,<br />ಬೊಮ್ಮನಹಳ್ಳಿ– ಪಿ.ಮಣಿವಣ್ಣನ್,ಯಲಹಂಕ– ನವೀನ್ರಾಜ್ ಸಿಂಗ್,ದಕ್ಷಿಣ– ಮುನೀಶ್ ಮೌದ್ಗಿಲ್,ಮಹದೇವಪುರ– ಡಾ.ಎನ್.ಮಂಜುಳಾ, ದಾಸರಹಳ್ಳಿ–ಪಿ.ಸಿ.ಜಾಫರ್ ಮತ್ತು ಆರ್.ಆರ್.ನಗರ– ಆರ್.ವಿಶಾಲ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕೋವಿಡ್ ಹರಡುತ್ತಿರುವುದನ್ನು ನಿಯಂತ್ರಿಸಲು ಬೆಂಗಳೂರನ್ನು ಎಂಟು ವಲಯಗಳಾಗಿ ವಿಂಗಡಿಸಿ ಅವುಗಳ ಉಸ್ತುವಾರಿಯನ್ನು ಏಳು ಸಚಿವರು ಹಾಗೂ ಒಬ್ಬರು ರಾಜಕೀಯ ಕಾರ್ಯದರ್ಶಿಗೆ ವಹಿಸಲಾಗಿದೆ.</p>.<p>ಸೋಂಕು ಹೆಚ್ಚುತ್ತಿರುವ ಬಗ್ಗೆ ಸಚಿವಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಕೊರೊನಾ ಹಿಮ್ಮೆಟ್ಟಿಸಲು ಎಲ್ಲ ಸಚಿವರೂ ಗಂಭೀರವಾಗಿ ಕಾರ್ಯನಿರ್ಹಿಸಬೇಕೆಂದು ಮುಖ್ಯಮಂತ್ರಿ ಸೂಚಿಸಿರುವುದಾಗಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.</p>.<p>ರಾಜಧಾನಿಯಲ್ಲಿ ಕೋವಿಡ್ ಪಿಡುಗನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಚಿವರು, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಜತೆಗೆ ಐಎಎಸ್ ಅಧಿಕಾರಿಗಳನ್ನೂ ನೇಮಿಸಲಾಗಿದೆ. ಕಂಟೈನ್ಮೆಂಟ್ ವಲಯಗಳು ಸೇರಿ ಎಲ್ಲೆಡೆ ಬಿಗಿ ಕ್ರಮ, ಪರೀಕ್ಷೆಗಳ ಸಂಖ್ಯೆ ಹೆಚ್ಚಿಸುವುದು, ಚಿಕಿತ್ಸೆಗೆ ರೋಗಿಗಳ ಪರದಾಟ ತಪ್ಪಿಸುವ ಹೊಣೆ ಈ ಉಸ್ತುವಾರಿಗಳದ್ದಾಗಿದೆ.</p>.<p class="Subhead"><strong>ವಲಯಗಳ ಉಸ್ತುವಾರಿ: </strong>ಡಾ.ಸಿ.ಎನ್.ಅಶ್ವತ್ಥನಾರಾಯಣ, ಎಸ್.ಟಿ.ಸೋಮಶೇಖರ್, ಆರ್.ಅಶೋಕ,ಎಸ್.ಸುರೇಶ್ ಕುಮಾರ್, ಬೈರತಿ ಬಸವರಾಜ್, ಕೆ.ಗೋಪಾಲಯ್ಯ, ವಿ.ಸೋಮಣ್ಣ ಮತ್ತು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್.</p>.<p class="Subhead"><strong>ಐಎಎಸ್ ಅಧಿಕಾರಿಗಳು:</strong> ಬೆಂಗಳೂರು ಪೂರ್ವ– ತುಷಾರ್ ಗಿರಿನಾಥ್, ಪಶ್ಚಿಮ– ರಾಜೇಂದ್ರ ಕುಮಾರ್ ಕಟಾರಿಯಾ,<br />ಬೊಮ್ಮನಹಳ್ಳಿ– ಪಿ.ಮಣಿವಣ್ಣನ್,ಯಲಹಂಕ– ನವೀನ್ರಾಜ್ ಸಿಂಗ್,ದಕ್ಷಿಣ– ಮುನೀಶ್ ಮೌದ್ಗಿಲ್,ಮಹದೇವಪುರ– ಡಾ.ಎನ್.ಮಂಜುಳಾ, ದಾಸರಹಳ್ಳಿ–ಪಿ.ಸಿ.ಜಾಫರ್ ಮತ್ತು ಆರ್.ಆರ್.ನಗರ– ಆರ್.ವಿಶಾಲ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>