ವಿಜಯಪುರ: ಭೀಮಾ ತೀರದ ರೌಡಿ ಶೀಟರ್ ಗಳಾದ ಧರ್ಮರಾಜ ಚಡಚಣನ ನಕಲಿ ಎನ್ಕೌಂಟರ್ ಹಾಗೂ ಈತನ ಸಹೋದರ ಗಂಗಾಧರ ಚಡಚಣನ ನಿಗೂಢ ಹತ್ಯೆ ಪ್ರಕರಣದ ಪ್ರಮುಖ ಆರೋಪಿ, ತಲೆ ಮರೆಸಿಕೊಂಡಿದ್ದ ಸಿಪಿಐ ಎಂ.ಬಿ.ಅಸೋಡೆಯನ್ನು ಸಿಐಡಿ ಪೊಲೀಸರು ಶನಿವಾರ ಕೋಲ್ಕತ್ತಾದಲ್ಲಿ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಚಡಚಣ ಪೊಲೀಸ್ ಠಾಣೆಯ ಸಿಪಿಐ ಆಗಿದ್ದ ಅಸೋಡೆ, ಹತ್ಯೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಲೆಮರೆಸಿಕೊಂಡಿದ್ದ.
ಆತನ ಬಂಧನಕ್ಕೆ ನಾಲ್ಕು ತಿಂಗಳಿನಿಂದ ಪ್ರಯತ್ನ ನಡೆದಿತ್ತು. ಆತ ಜಾಮೀನು ಪಡೆಯಲು ಯತ್ನಿಸಿದ್ದರೂ ಸಿಕ್ಕಿರಲಿಲ್ಲ.