‘ಅವಿವಾಹಿತನಾಗಿದ್ದ ಆತ, ಲೈಂಗಿಕ ಸಂಪರ್ಕ ಇಟ್ಟುಕೊಳ್ಳುವ ದುರುದ್ದೇಶದಿಂದಅದೇ ಗ್ರಾಮದ ವಿಧವೆಯನ್ನು ಪರಿಚಯ ಮಾಡಿಕೊಂಡು, ಜನತಾ ಮನೆ ಕೊಡಿಸುವುದಾಗಿ ಆಸೆ ಹುಟ್ಟಿಸಿದ್ದ. 2016ರ ಅ. 10ರಂದು ರಾತ್ರಿ 9ರ ಸುಮಾರಿಗೆ ಜನತಾ ಮನೆ ಸಲುವಾಗಿ ಫೋಟೊ ತೆಗೆಸಬೇಕು ಎಂದು ಹೇಳಿ ಸ್ಟುಡಿಯೊ ಒಂದಕ್ಕೆ ಕರೆದುಕೊಂಡು ಹೋಗಿದ್ದ. ಬಳಿಕ ಗ್ರಾಮಲೆಕ್ಕಾಧಿಕಾರಿ ಕಚೇರಿಗೆ ಸಹಿ ಮಾಡಬೇಕು ಎಂದು ಕರೆದೊಯ್ದು ಗ್ರಾಮದ ಸರ್ಕಾರಿ ಪಿಯು ಕಾಲೇಜಿನ ವರಾಂಡದಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಮನೆಯಲ್ಲಿ ವಿಷಯ ತಿಳಿಸುವುದಾಗಿ ಆಕೆ ಚೀರಾಡಿದ್ದಕ್ಕೆ ಕಲ್ಲಿನಿಂದ ತಲೆ ಹಾಗೂ ಮುಖವನ್ನು ಜಜ್ಜಿ ಸ್ಥಳದಲ್ಲಿಯೇ ಭೀಕರವಾಗಿ ಕೊಲೆ ಮಾಡಿದ್ದ’ ಎಂದು ಮಹಿಳೆಯ ಸೋದರ ಬಸಪ್ಪ ನಾವಲಗಿ ನಿಪ್ಪಾಣಿ ಠಾಣೆಗೆ ದೂರು ನೀಡಿದ್ದರು. ತನಿಖಾಧಿಕಾರಿ ಕಿಶೋರ್ ಭರಣಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.