ವಿಜಯಪುರ:ಭೀಮಾ ತೀರದ ರೌಡಿ ಧರ್ಮರಾಜ ಚಡಚಣನ ನಕಲಿ ಎನ್ಕೌಂಟರ್ ಹಾಗೂ ಈತನ ಸಹೋದರ ಗಂಗಾಧರ ಚಡಚಣನ ನಿಗೂಢ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಪ್ರಮುಖ ಆರೋಪಿಗಳಿಗೆ ಜಾಮೀನು ಸಿಕ್ಕಿರುವುದಕ್ಕೆ, ಕೊಲೆಯಾದ ಸಹೋದರರ ತಾಯಿ ವಿಮಲಾಬಾಯಿ ಚಡಚಣ ಆತಂಕ ವ್ಯಕ್ತಪಡಿಸಿದ್ದಾರೆ.
‘ನನ್ನಿಬ್ಬರು ಮಕ್ಕಳನ್ನು ಕೊಲೆಗೈದ ಮಹಾದೇವ ಭೈರಗೊಂಡ, ಪಿಎಸ್ಐ ಗೋಪಾಲ ಹಳ್ಳೂರಗೆ ಕಲಬುರ್ಗಿ ಹೈಕೋರ್ಟ್ ಜಾಮೀನು ನೀಡಿದೆ. ಇವರಿಂದ ನನಗೆ ಜೀವಭಯವಿದೆ’ ಎಂದು ವಿಮಲಾಬಾಯಿ ಚಡಚಣ ಅಜ್ಞಾತ ಸ್ಥಳದಿಂದ ವಿಡಿಯೊ ಕ್ಲಿಪ್ಪಿಂಗ್ ಮೂಲಕ ತಿಳಿಸಿದ್ದಾರೆ.
‘ಮಹಾದೇವನಿಗೆ ದುಡ್ಡಿನ ಬಲವಿದೆ. ರಾಜಕಾರಣಿಗಳ ಬೆಂಬಲವಿದೆ. ಇನ್ಮುಂದೆ ನಾನು ನ್ಯಾಯಾಲಯದ ಕೆಲಸಕ್ಕೂಹೋಗಿ ಬರುವುದು ಕಷ್ಟವಿದೆ. ಯಾವ ಸಂದರ್ಭ ಬೇಕಾದರೂ ನನ್ನ ಹತ್ಯೆಗೈಯಬಹುದು’ ಎಂದು ವಿಮಲಾಬಾಯಿ ವಿಡಿಯೊದಲ್ಲಿ ಭಯ ವ್ಯಕ್ತಪಡಿಸಿದ್ದಾರೆ.
‘ನನಗೆ ನ್ಯಾಯ ಸಿಗದಾಗಿದೆ. ತಮ್ಮ ರೊಕ್ಕ, ಅಧಿಕಾರದ ಪ್ರಭಾವ ಬಳಸಿಕೊಂಡು ಮಹಾದೇವ ಸಾಕ್ಷ್ಯ ನಾಶ ಪಡಿಸುತ್ತಾನೆ. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು’ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.