ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಪರೇಷನ್ ಕಮಲದ ಧ್ವನಿ ಮುದ್ರಿಕೆಯಿದೆ. ಶಾಸಕ ಶ್ರೀನಿವಾಸ ಗೌಡರು ಬಿಜೆಪಿ ನೀಡಿದ್ದ ಆಮಿಷದ ಬಗ್ಗೆ ಸದನದಲ್ಲಿ ಹೇಳಿದ್ದಾರೆ. 17 ಶಾಸಕರು ರಾಜೀನಾಮೆ ನೀಡುವ ಸಂದರ್ಭದಲ್ಲಿ ಯಡಿಯೂರಪ್ಪ ಮತ್ತು ಅಮಿತ್ ಶಾ ಸಹಕಾರ ನೀಡಿದ್ದನ್ನು ರಮೇಶ ಜಾರಕಿಹೊಳಿ ಬಹಿರಂಗವಾಗಿ ಹೇಳಿದ್ದಾರೆ. ಇದಕ್ಕೆ ಇನ್ನೇನು ದಾಖಲೆ ಬೇಕು ‘ ಯಡಿಯೂರಪ್ಪ ಮಾನನಷ್ಟ ಮೊಕದ್ದಮೆ ಹೂಡಿದರೆ ನಮಗೇ ಅನುಕೂಲ’ ಎಂದು ತಿರುಗೇಟು ನೀಡಿದರು.