ನ್ಯಾಮತಿ: ‘ಪ್ರಾಚೀನ ಕಾಲದಿಂದಲೂ ಪಂಚಪೀಠಗಳ ಜಗದ್ಗುರು ಪುರಪ್ರವೇಶ ಸಮಯದಲ್ಲಿ ಅಡ್ಡಪಲ್ಲಕ್ಕಿ ಉತ್ಸವ ನಡೆಸಬೇಕೆಂಬ ಕಟ್ಟಳೆಯನ್ನು ತೆಗೆದುಹಾಕಲಾಗಿದೆ. ಅಡ್ಡಪಲ್ಲಕ್ಕಿ ಉತ್ಸವ ನಮಗೆ ಬೇಕಿಲ್ಲ. ಭಕ್ತರ ಅಪೇಕ್ಷೆಯಂತೆ ಅಡ್ಡಪಲ್ಲಕ್ಕಿ, ರಥ ಹಾಗೂ ಪಾದಯಾತ್ರೆ ಮಾಡಲು ಸಿದ್ಧ’ ಎಂದು ಉತ್ತರ ಪ್ರದೇಶದ ವಾರಾಣಸಿ ಕಾಶಿ ಪೀಠದ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.