‘ನಮ್ಮ ನಂಬಿಕೆಗಳನ್ನು ಪ್ರಶ್ನಿಸುವುದಿದ್ದರೆ ವೈಜ್ಞಾನಿಕ ವಿಧಾನದಲ್ಲಿ ಬರಬೇಕು. ಅದನ್ನು ಬಿಟ್ಟು ಅಗ್ಗದ ಪ್ರಚಾರಕ್ಕಾಗಿ ನಮ್ಮ ಶ್ರೀರಾಮ, ಭಗವದ್ಗೀತೆ ಬಗ್ಗೆ ಹಗುರವಾಗಿ ಮಾತನಾಡಿದರೆ, ಅವಹೇಳನ ಮಾಡಿದರೆ ಹಾಗೂ ಅಪನಂಬಿಕೆ ವ್ಯಕ್ತಪಡಿಸಿದರೆ ನಡೆಯುವುದಿಲ್ಲ ಎನ್ನುವ ಸಂದೇಶ ನೀಡಬೇಕು. ಹಾಗೆ ಮಾತನಾಡುವವರಿಗೆ ಪಾಪ ಬರುತ್ತದೆಂದು ಸುಮ್ಮನಾಗಬಾರದು. ಸನಾತನ ಸಂಸ್ಕೃತಿಯ ವಿಶೇಷಗಳು, ಸಾಧಕರ ಬಗ್ಗೆ ಹಗುರವಾಗಿ ಮಾತಾಡಿದರೆ ಸಹಿಸುವುದಿಲ್ಲ ಎಂದು ಜಾಗೃತರಾಗಬೇಕು. ಅದಕ್ಕೆ ತಕ್ಕಂತೆ ಮಾನಸಿಕ ಸ್ಥಿತಿ, ಶಕ್ತಿ ಹಾಗೂ ಸಾಮರ್ಥ್ಯ ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.