ವಿಜ್ಞಾನ ಹೊರತುಪಡಿಸಿದಂತೆ ಅನ್ಯ ವಿಷಯಗಳ ಮೌಲ್ಯಮಾಪನ ಪ್ರಕ್ರಿಯೆ ಉಪನ್ಯಾಸಕರ ಸಹಕಾರದಿಂದ ಬಹುಪಾಲು ಪೂರ್ಣಗೊಂಡಿದ್ದು, ಅಂಕಗಳ ಗಣಕೀಕರಣ ಕಾರ್ಯ ಪ್ರಗತಿಯಲ್ಲಿದೆ ಎಂದರು. ಎಲ್ಲ ಮೌಲ್ಯಮಾಪನ ಕೇಂದ್ರಗಳಲ್ಲಿ ಸುರಕ್ಷತಾ ಕ್ರಮಗಳನ್ನು ಇಲಾಖೆಯು ಜಾರಿಯಲ್ಲಿಟ್ಟಿದ್ದು, ಬೆಂಗಳೂರು ಸುತ್ತ ಮುತ್ತ ಲಿನ 12 ಜಿಲ್ಲೆಗಳ ವಿಜ್ಞಾನ ಬೋಧಕರು, ಇಲಾಖೆಯ ನಿರ್ದೇಶನದಂತೆ ತಕ್ಷಣದಿಂದ ಕಡ್ಡಾಯವಾಗಿ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಮನವಿ ಮಾಡಿದರು.