ಕವಿತಾಳ (ರಾಯಚೂರು ಜಿಲ್ಲೆ): ಭಾರತೀಯ ಸ್ಟೇಟ್ ಬ್ಯಾಂಕ್ನ ಇಲ್ಲಿನ ಶಾಖೆಯಲ್ಲಿ ಬೆಳೆ ಸಾಲ ಮನ್ನಾಕ್ಕೆ ಸಂಬಂಧಿಸಿದ ಸ್ವಯಂ ದೃಢೀಕರಣ ಪತ್ರವನ್ನು ಪಡೆದು ಹಿಂಬರಹ ನೀಡುವ ಪ್ರಕ್ರಿಯೆ ರಜಾ ದಿನವಾದ ಭಾನುವಾರವೂ ನಡೆಯಿತು. ಬಿಸಿಲಿನಿಂದ ರೈತರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಬ್ಯಾಂಕ್ನಿಂದ ಶಾಮಿಯಾನ ಹಾಕಲಾಗಿತ್ತು.