ಬೆಂಗಳೂರು: ಬಿಜೆಪಿ ಸದಸ್ಯರು ನಡೆಸಿದ ಧರಣಿ ಹಾಗೂ ಗದ್ದಲದ ನಡುವೆಯೇ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಬಜೆಟ್ನ ಪಾರ್ಶ್ವಿಕ ಮೊತ್ತವಾದ ₹ 80,168 ಕೋಟಿ ಲೇಖಾನುದಾನಕ್ಕೆ ಗುರುವಾರ ಉಭಯ ಸದನಗಳಲ್ಲೂ ಒಪ್ಪಿಗೆ ಪಡೆದರು.
2019-2020ನೇ ಸಾಲಿಗೆ ₹ 2.34 ಲಕ್ಷ ಕೋಟಿ ಗಾತ್ರದ ಬಜೆಟ್ಅನ್ನು ಅವರು ಕಳೆದ ಶುಕ್ರವಾರ ಮಂಡಿಸಿದ್ದರು. ಅದರ ಮೂರನೇ ಒಂದು ಭಾಗದಷ್ಟು ಹಣವನ್ನು ಹೊಸ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳ ಅವಧಿಯಲ್ಲಿ ವ್ಯಯಿಸಲು ಅವರೀಗ ಶಾಸನಸಭೆಯ ಅನುಮೋದನೆ ಪಡೆದುಕೊಂಡಿದ್ದಾರೆ.