₹ 38,000 ಕೋಟಿ ನಷ್ಟ: ಕಳೆದ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಸುರಿದಿದ್ದ ಭಾರಿ ಮಳೆ ಹಾಗೂ ಪ್ರವಾಹದಿಂದ ರಾಜ್ಯದಲ್ಲಿ ₹ 38,000 ಕೋಟಿಯಷ್ಟು ನಷ್ಟ ಉಂಟಾಗಿದೆ ಎಂದು ರಾಜ್ಯ ಸರ್ಕಾರ ಸಲ್ಲಿಸಿದ್ದ ವರದಿ ಆಧರಿಸಿ ಕೇಂದ್ರವು ಅಕ್ಟೋಬರ್ 4ರಂದು ಮುಂಗಡ ಪರಿಹಾರದ ರೂಪದಲ್ಲಿ 1,200 ಕೋಟಿ ಮಂಜೂರು ಮಾಡಿತ್ತು.ಇದೀಗ ಮಂಜೂರಾಗಿರುವ ಮೊತ್ತವೂ ಸೇರಿ ರಾಜ್ಯವು ಪ್ರವಾಹ ಪರಿಹಾರ ರೂಪದಲ್ಲಿ ಒಟ್ಟು ₹3,069.85 ಕೋಟಿ ಪಡೆದಂತೆ ಆಗಲಿದೆ.