ಸಿದ್ದಾಪುರ: ಹಿರಿಯ ಸ್ವಾತಂತ್ರ್ಯಯೋಧ ನರಸಿಂಹ ಗಣಪತಿ ಹೆಗಡೆ ಮಗೇಗಾರ (100) ಭಾನುವಾರ ನಿಧನರಾದರು. ಅವರಿಗೆ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.
ಸ್ವಾತಂತ್ರ್ಯ ಹೋರಾಟದ ಅಂಗವಾಗಿ ತಾಲ್ಲೂಕಿನಲ್ಲಿ 1931ರಲ್ಲಿ ನಡೆದಿದ್ದ ಜಂಗಲ್ ಸತ್ಯಾಗ್ರಹ, ನಂತರ ನಡೆದ ಕರ ನಿರಾಕರಣೆ ಚಳವಳಿ ಹಾಗೂ ಚಲೇಜಾವ್ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.
ನರಸಿಂಹ ಹೆಗಡೆ, ಚಲೇಜಾವ್ ಚಳವಳಿಯ ಸಂದರ್ಭದಲ್ಲಿಯೇ ಒಂದು ವರ್ಷ ಸೆರೆವಾಸ ಅನುಭವಿಸಿದ್ದರು.
ಮಗೇಗಾರಿನ ಮಹಾಗಣಪತಿ ನಾಟ್ಯ ಕಲಾ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು , ಮಹಾಗಣಪತಿ ದೇವಾಲಯದ ಅಷ್ಟಬಂಧ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಅವರು ಕೆಲಸ ಮಾಡಿದ್ದರು. ಭಾನ್ಕುಳಿ ಮಠದಲ್ಲಿಯೂ ಸೇವೆ ಸಲ್ಲಿಸಿದ್ದರು.