ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 1.40 ಲಕ್ಷ ರೈತರು ಸಾಲ ಮಾಡಿದ್ದಾರೆ. ಇದರ ಒಟ್ಟು ಮೊತ್ತ ₹798 ಕೋಟಿ. ಡಿ.28 ರಂದು ಮುಖ್ಯಮಂತ್ರಿಯವರು ಕೇವಲ ₹17.56 ಕೋಟಿ ಸಾಲ ಮನ್ನಾದ ಋಣ ಮುಕ್ತ ಪತ್ರ ನೀಡಿ ಹೋಗಿದ್ದಾರೆ. ಈ ರೀತಿ ಗಿಮಿಕ್ ಮಾಡುವುದನ್ನು ಬಿಟ್ಟು, ನವೆಂಬರ್ 31 ರವರೆಗೆ ಎಷ್ಟು ರೈತರು ಸಾಲ ಮಾಡಿದ್ದಾರೊ, ಅವರ ಎಲ್ಲ ಸಾಲವನ್ನೂ ಕೂಡಲೇ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.