‘ಮುಖ್ಯಮಂತ್ರಿ ಸ್ಥಾನಕ್ಕೆ ಎಚ್.ಡಿ. ಕುಮಾರಸ್ವಾಮಿ ರಾಜೀನಾಮೆ ನೀಡಿದ ಬೆನ್ನಲ್ಲೇ, ಈ ಬಗ್ಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಮನೆಯಲ್ಲಿ ಚರ್ಚೆಯಾಯಿತು. ಅವರೆಲ್ಲ ಹುಣಸೂರನ್ನು ಗೆಲ್ಲಲೇಬೇಕು ಎಂದು ಹೇಳಿ, ನನ್ನ ಮಗನನ್ನು ಕಣಕ್ಕಿಳಿಸುವಂತೆ ಸೂಚಿಸಿದರು. ಈ ಕ್ಷೇತ್ರವನ್ನು ಜೆಡಿಎಸ್ ಗೆಲ್ಲಲಾಗುವುದಿಲ್ಲ; ಅಲ್ಲಿ ಶೆಟ್ರು (ಕಾಂಗ್ರೆಸ್ನ ಎಚ್.ಪಿ. ಮಂಜುನಾಥ’) ಗೆಲ್ಲುವುದು ಎಂದು ಆವಾಗಲೇ ನಾನು ಹೇಳಿದೆ’ ಎಂದರು.