ಕಾರ್ಕಳದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ನಾನು ಮಂಡ್ಯಕ್ಕೆ ಹೋಗಿ ಆರು ದಿನಗಳಾಗಿವೆ. ಜೆಡಿಎಸ್ ಮಂಡ್ಯದಲ್ಲಿ ಯಾವ ಕುತಂತ್ರ ಮಾಡುತ್ತಿಲ್ಲ. ಕುತಂತ್ರ ಮಾಡುತ್ತಿರುವವರು ಯಾರು ಎಂದು ಗೊತ್ತಿದೆ. ಮಂಡ್ಯ ನಮ್ಮ ಹೃದಯವಿದ್ದಂತೆ, ಅಲ್ಲಿನವರ ನಾಡಿಮಿಡಿತ ಚೆನ್ನಾಗಿ ಗೊತ್ತಿದೆ. ಯಾರ ಡ್ರಾಮಾ ಕೂಡ ನಡೆಯುವುದಿಲ್ಲ’ ಎಂದರು.