ಎಚ್.ಡಿ.ಕೋಟೆ: ಅಂತರಸಂತೆ ವನ್ಯಜೀವಿ ವಲಯದ ಹೊನ್ನಮ್ಮನಕಟ್ಟೆ ಸಮೀಪ ಹುಲಿ ಸೆರೆ ಕಾರ್ಯಾಚರಣೆಗಾಗಿ ಬಳ್ಳೆ ಶಿಬಿರದಿಂದ ಕರೆತರಲಾಗಿದ್ದ ಅರ್ಜುನ ಆನೆಯು ಕೆಲಕಾಲ ತಪ್ಪಿಸಿಕೊಂಡಿದ್ದು, ಆತಂಕ ಸೃಷ್ಟಿಸಿತ್ತು.
ರಸ್ತೆಯಲ್ಲಿ ನಿಂತಿದ್ದ ಆನೆಯನ್ನು ಗಮನಿಸಿದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಬಳಿಕ ಇಲಾಖೆ ಸಿಬ್ಬಂದಿ ಆನೆಯನ್ನು ಕರೆದೊಯ್ದರು.