ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ಮಲೆನಾಡು ಹಾಗೂ ಅರೆ ಮಲೆನಾಡು ಭಾಗದಲ್ಲಿ ಚಿಕ್ಕಮಕ್ಕಳಿಂದ ಮಧ್ಯಮ ವಯಸ್ಸಿನ ಬಹುಪಾಲು ಜನರಲ್ಲಿ ಪ್ರೊಟೀನ್, ಪೋಷಕಾಂಶಗಳ ಕೊರತೆ ಇದೆ. ಇದರಿಂದಾಗಿ ಅವರೆಲ್ಲ ರಕ್ತಹೀನತೆ, ಅಶಕ್ತಿ, ಪಚನಕ್ರಿಯೆಯಲ್ಲಿ ವ್ಯತ್ಯಯ, ಮಾಂಸಖಂಡ, ಸಂದುಗಳಲ್ಲಿ ನೋವು, ನಿದ್ರಾಹೀನತೆ, ವಿಪರೀತ ಸುಸ್ತಿನಿಂದ ಬಳಲುತ್ತಿದ್ದಾರೆ ಎನ್ನುತ್ತಾರೆ ಒಂದು ವರ್ಷದಿಂದ ಈ ಕುರಿತು ಅಧ್ಯಯನ ನಡೆಸುತ್ತಿರುವ ಸಂರಕ್ಷಣಾ ಜೀವಶಾಸ್ತ್ರಜ್ಞ ಡಾ.ಕೇಶವ ಕೊರ್ಸೆ.