ಬೆಂಗಳೂರು: ಕರ್ನಾಟಕ ಹೈಕೋರ್ಟ್ಗೆ ಎಂಟು ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಶಿಫಾರಿಸಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಮೂವರು ಸದಸ್ಯರ ಕೊಲಿಜಿಯಂ ಸೋಮವಾರ ಸಮ್ಮತಿಸಿದೆ.
ಸವಣೂರು ವಿಶ್ವಜಿತ್ ಶೆಟ್ಟಿ, ಸಿಂಗಾಪುರಂ ರಾಘವಾಚಾರ್ ಕೃಷ್ಣಕುಮಾರ್, ಮರಳೂರು ಇಂದ್ರಕುಮಾರ್ ಅರುಣ್, ಮೊಹಮ್ಮದ್ ಗೌಸ್, ಶುಕುರೆ ಕಮಾಲ್, ಅಶೋಕ್ ಸುಭಾಷ್ಚಂದ್ರ ಕಿಣಗಿ, ಗೋವಿಂದರಾಜ್ ಸೂರಜ್, ಇಂಗಳಗುಪ್ಪೆ ಸೀತಾರಾಮಯ್ಯ ಇಂದಿರೇಶ್ ಮತ್ತು ಸಚಿನ್ ಶಂಕರ್ ಮಗದುಂ ಅವರನ್ನು ಶಿಫಾರಸು ಮಾಡಲಾಗಿದೆ.
ಇದೇ ಪಟ್ಟಿಯಲ್ಲಿದ್ದ ಬಿ.ವಿ.ವಿದ್ಯುಲ್ಲತಾ ಅವರ ಹೆಸರನ್ನು ವಾಪಸ್ ಹೈಕೋರ್ಟ್ಗೆ ಕಳುಹಿಸಲಾಗಿದೆ.