ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಸರ್ಕಾರ ಭೂ ಸುಧಾರಣೆ ಕಾಯ್ದೆ ಮೂಲಕ ಗೇಣಿದಾರರಿಗೆ ಅನುಕೂಲ ಮಾಡಿತ್ತು. ಆದರೆ, ರಾಜ್ಯ ಸರ್ಕಾರ, ಹಣವಂತರಿಗೆ ಮಣೆ ಹಾಕಿದೆ. ಇದರಿಂದ ಕೃಷಿಕರ ಕ್ಷೇತ್ರ, ಹಣವಂತರು, ವ್ಯಾಪಾರಿಗಳಿಂದ ತುಂಬಲಿದೆ. ರಾಜ್ಯದಲ್ಲಿ ಕಾಂಚಾಣ ಕುಣಿಯುತ್ತಿದೆ ಎಂಬದಕ್ಕೆ ಈ ನಿರ್ಣಯವೇ ಒಂದು ಉತ್ತಮ ಉದಾಹರಣೆ’ ಎಂದರು.