ಸೋಮವಾರ ನಗರದ ವೇಣುಗೋಪಾಲ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಿಂದಾಲ್ಗೆ ಯಾವುದೇ ಕಾರಣಕ್ಕೂ ಜಮೀನು ಮಾರಾಟ ಮಾಡಬಾರದು. 35 ಪೈಸೆಗೆ ಒಂದು ಚದರ ಅಡಿ ಜಮೀನು ಜಗತ್ತಿನಲ್ಲಿ ಎಲ್ಲಾದರೂ ಸಿಗುತ್ತದೆಯೇ? ಅಷ್ಟು ಕಡಿಮೆ ಬೆಲೆಯಲ್ಲಿ ಜಿಂದಾಲ್ಗೆ ಜಮೀನು ಕೊಡುತ್ತಿರುವುದು ಎಷ್ಟು ಸರಿ. ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ವಿಜಯನಗರ ಜಿಲ್ಲೆ ಮಾಡಬೇಕೆಂಬ ಬೇಡಿಕೆ ಈಡೇರಿಸುವವರೆಗೆ ನನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ.ಇದೇ ವಿಷಯವನ್ನು ಸ್ಪೀಕರ್ಗೂ ತಿಳಿಸುವೆ. ಅವರು ಕೇಳಿದರೆ ಇನ್ನೊಮ್ಮೆ ರಾಜೀನಾಮೆ ಪತ್ರ ಕೊಡುವೆ’ ಎಂದರು.