ಶಾಸಕರು ಸಲ್ಲಿಸಿದ್ದ ರಾಜೀನಾಮೆಯನ್ನು ಒಪ್ಪಿಕೊಳ್ಳದೆ ಅನರ್ಹಗೊಳಿಸಿದ್ದ ರಮೇಶ್ ಕುಮಾರ್, ‘ರಾಜೀನಾಮೆ ಒಂದು ಗೌರವಯುತವಾದ ಪ್ರಕ್ರಿಯೆ, ಅನರ್ಹತೆ ಒಂದು ಶಿಕ್ಷೆ.ರಾಜೀನಾಮೆ ಮತ್ತು ಅನರ್ಹತೆಯನ್ನು ಒಂದೇ ದೃಷ್ಟಿಕೋನದಿಂದ ನೋಡಲು ಆಗಲ್ಲ. ಅನರ್ಹಗೊಳಿಸಿದ್ದು ಸರಿಯಿದೆ ಎಂದೇ ಸುಪ್ರೀಂಕೋರ್ಟ್ ಸಹ ಹೇಳಿದೆ’ ಎಂದರು.