<p><strong>ತುಮಕೂರು:</strong> ಶನಿವಾರ ಸಂಜೆ ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಅಭ್ಯರ್ಥಿಗಳು ನಿರಾಳರಾದರು. ಭಾನುವಾರ ಬೆಳಿಗ್ಗೆ ಬಹುತೇಕ ಅಭ್ಯರ್ಥಿಗಳು ನಿರಾಳವಾಗಿಯೇ ಇದ್ದರು. ಪತ್ರಿಕೆ, ಸುದ್ದಿವಾಹಿನಿಗಳಲ್ಲಿನ ಚುನಾವಣಾ ಸಮೀಕ್ಷೆ ಗಮನಿಸುವಲ್ಲಿ ಕೆಲವರು ಮಗ್ನರಾಗಿದ್ದರು.</p>.<p>ತುಮಕೂರು ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ರಫೀಕ್ ಅಹಮದ್ ಅವರು ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಮನೆಯಲ್ಲಿ ಕಾಲ ಕಳೆದರು. ಚುನಾವಣೆ ಒತ್ತಡದಿಂದ ಮುಕ್ತರಾಗಿ ಸಂಡೇ ಮೂಡ್ನಲ್ಲಿ ಕಾಲ ಕಳೆದರು.</p>.<p>ಬೆಂಬಲಿಗರು, ಪಕ್ಷದ ಮುಖಂಡರು, ಕಾರ್ಯಕರ್ತರು ಶಾಸಕರ ಮನೆಗೇ ಬಂದು ಶನಿವಾರ ತಮ್ಮ ಪ್ರದೇಶದಲ್ಲಿ ನಡೆದ ಮತದಾನ ಪ್ರಮಾಣದ ಬಗ್ಗೆ ವಿವರಿಸಿದರು. ರಾಜಕೀಯ ಲೆಕ್ಕಾಚಾರದ ಬಗ್ಗೆ ಚರ್ಚೆ ನಡೆಸಿದರು.</p>.<p>ಶಾಸಕರ ಮಾವ ಹಾಗೂ ಕಾಂಗ್ರೆಸ್ ಮುಖಂಡರಾದ ಷಫೀ ಅಹಮದ್ ಅವರೂ ರಫೀಕ್ ಅವರ ಮನೆಗೆ ಬಂದು ಮೇ 15ರಂದು ಬರಲಿರುವ ಫಲಿತಾಂಶದ ಬಗ್ಗೆ ಲೆಕ್ಕಾಚಾರ ಹಾಕಿದರು.</p>.<p>ತಗ್ಗಿದ ಮತದಾನಕ್ಕೆ ಬೇಸರ: ‘ಮತದಾನದ ಬಳಿಕ ಸ್ವಲ್ಪ ಒತ್ತಡ ಕಡಿಮೆಯಾಗಿದೆ. ಮತದಾನ ನಗರದ ಎಲ್ಲ ಕಡೆಶಾಂತಿಯುತವಾಗಿ ನಡೆದಿದ್ದು ಸಂತೋಷವಾಗಿದೆ. ಆದರೆ, ಕಳೆದ ಬಾರಿಗಿಂತ ಕಡಿಮೆ ಮತದಾನ ಆಗಿರುವುದು ಬೇಸರವನ್ನುಂಟು ಮಾಡಿದೆ’ ಎಂದು ಪ್ರಜಾವಾಣಿಗೆ ತಿಳಿಸಿದರು.</p>.<p><strong>ಮದುವೆಗೆ ಹಾಜರ್!</strong></p>.<p>ತುಮಕೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಹಾಗೂ ಶಾಸಕ ಬಿ.ಸುರೇಶ್ಗೌಡ ಅಬರು ಮತದಾನ ಮರುದಿನ ಭಾನುವಾರ ಕ್ಷೇತ್ರದಲ್ಲಿಯೇ ಕಾಲ ಕಳೆದರು.</p>.<p>ನಂದಿಹಳ್ಳಿ, ದಾಸರಹಳ್ಳಿ, ಬೆಳ್ಳಾವಿ ಸೇರಿದಂತೆ 8 ಕಡೆ ಮದುವೆ ಸಮಾರಂಭಗಳಲ್ಲಿ ಪಾಲ್ಗೊಂಡು ವಧುವರರಿಗೆ ಶುಭ ಕೋರಿದರು. ಅಲ್ಲದೇ, ತಮಗೆ ಮತ ಹಾಕಿಸಲು ಶ್ರಮಿಸಿದ ಕ್ಷೇತ್ರದ ಮುಖಂಡರು, ಕಾರ್ಯಕರ್ತರು, ಗ್ರಾಮದ ಮುಖಂಡರ ಮನೆಗಳಿಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದರು. ಕಾಫಿ, ಉಪಾಹಾರ ಸೇವಿಸಿ ರಾಜಕೀಯ ಲೆಕ್ಕಾಚಾರ ನಡೆಸಿದರು.</p>.<p>ಅಲ್ಲದೇ, ಪಕ್ಷದ ಇಬ್ಬರು ಕಾರ್ಯಕರ್ತರ ತಂದೆಯವರು ಮೃತಪಟ್ಟಿದ್ದರಿಂದ ಅಲ್ಲಿಗೂ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದರು.</p>.<p><strong>ಮತದಾನ ಪ್ರಮಾಣ ಹೆಚ್ಚಳಕ್ಕೆ ಸಂತಸ:</strong> ‘ರಾಜಕೀಯ ಎಂಬುದು ಇದ್ದೇ ಇರುತ್ತೆ. ಆದರೆ, ಮತದಾರರು ಮತದಾನಕ್ಕೆ ಉತ್ಸಾಹ ತೋರಿದ್ದು ತುಂಬಾ ಸಂತೋಷವಾಗಿದೆ’ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ತುಮಕೂರು ಗ್ರಾಮಾಂತರದಲ್ಲಿ ಶೇ 85.5 ಮತದಾನ ಆಗಿರುವುದು ಖುಷಿಯಾಗಿದೆ. ಮತವನ್ನು ಯಾವುದೇ ಅಭ್ಯರ್ಥಿಗೆ ಹಾಕಲಿ. ಅದು ಬೇರೆ ವಿಚಾರ. ಆದರೆ, ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರಲ್ಲ ಅದು ಪ್ರಶಂಸನೀಯ’ ಎಂದು ಹೇಳಿದರು.</p>.<p>ತುಮಕೂರು ನಗರ ವಿಧಾನಸಭಾ ಕ್ಷೇತ್ರದವ ಬಿಜೆಪಿ ಅಭ್ಯರ್ಥಿ ಜಿ.ಬಿ.ಜ್ಯೋತಿ ಗಣೇಶ್ ಅವರು ಭಾನುವಾರ ಮನೆಯಲ್ಲಿಯೇ ವಿಶ್ರಾಂತಿ ಪಡೆದು ಕಾಲ ಕಳೆದರು. ಮೊಬೈಲ್ನಲ್ಲಿ ಮತದಾನದ ಲೆಕ್ಕಾಚಾರಗಳ ಬಗ್ಗೆ ಮುಖಂಡರು, ಕಾರ್ಯಕರ್ತರೊಂದಿಗೆ ಚರ್ಚಿಸಿದರು.</p>.<p>ಜೆಡಿಎಸ್ ಅಭ್ಯರ್ಥಿ ಎನ್.ಗೋವಿಂದರಾಜ್ ಅವರೂ ಬೆಳಿಗ್ಗೆ ಯಿಂದ ಮನೆಯಲ್ಲಿ ಕಾಲ ಕಳೆದರು. ಸಂಜೆ ಮನೆಯಿಂದ ಹೊರಬಿದ್ದ ಅವರು ಸ್ನೇಹಿತರು ಮತ್ತು ಬೆಂಬಲಿಗರೊಂದಿಗೆ ತಮಗೆ ಲಭಿಸಬಹುದಾದ ಮತಗಳ ಬಗ್ಗೆ ಚರ್ಚೆ ನಡೆಸಿದರು.</p>.<p><strong>ವಿಶ್ರಾಂತಿ ಪಡೆದ ಅಭ್ಯರ್ಥಿಗಳು</strong></p>.<p><strong>ಪಾವಗಡ:</strong> ಚುನಾವಣೆ ಮುಗಿದ ನಂತರ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಭಾನುವಾರ ಆಪ್ತರು, ಕಾರ್ಯಕರ್ತರೊಂದಿಗೆ ಚರ್ಚೆಯಲ್ಲಿ ತೊಡಗಿದ್ದರು.</p>.<p>ಜೆಡಿಎಸ್ ಅಭ್ಯರ್ಥಿ ಕೆ.ಎಂ.ತಿಮ್ಮರಾಯಪ್ಪ ಸ್ವಗ್ರಾಮ ಕೆ.ಟಿ.ಹಳ್ಳಿ ಮನೆಯಲ್ಲಿ ಕಾರ್ಯಕರ್ತರೊಂದಿಗೆ ಚುನಾವಣೆ ಕುರಿತು ಸಮಾಲೋಚನೆ ನಡೆಸಿದರು. ಕೆಲಕಾಲ ಕುಟುಂಬ ಸದಸ್ಯರೊಡನೆ ವಿಶ್ರಾಂತಿ ಪಡೆದರು.</p>.<p>ಕಾಂಗ್ರೆಸ್ ಅಭ್ಯರ್ಥಿ ವೆಂಕಟರವಣಪ್ಪ ಹನುಮಂತನಹಳ್ಳಿ ತೋಟದ ಮನೆಯಲ್ಲಿ ಬೆಳಿಗ್ಗೆಯಿಂದಲೇ ವಿಶ್ರಾಂತಿ ಪಡೆದರು. ನಂತರ ಮುಖಂಡರೊಂದಿಗೆ ಚುನಾವಣೆ ಬಗ್ಗೆ ಚರ್ಚೆ ನಡೆಸಿದರು.</p>.<p>ಬಿಜೆಪಿ ಅಭ್ಯರ್ಥಿ ಜಿ.ವಿ.ಬಲರಾಂ ಅವರು ಗುಜ್ಜನಡು ಗ್ರಾಮದ ಮನೆಯಲ್ಲಿ ಕುಟುಂಬ ಸದಸ್ಯರೊಡನೆ ಕಾಲ ಕಳೆದರು. ಪಕ್ಷದ ಪ್ರಮುಖರೊಂದಿಗೆ ಕೆಲಕಾಲ ಮಾತುಕಥೆ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು:</strong> ಶನಿವಾರ ಸಂಜೆ ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಅಭ್ಯರ್ಥಿಗಳು ನಿರಾಳರಾದರು. ಭಾನುವಾರ ಬೆಳಿಗ್ಗೆ ಬಹುತೇಕ ಅಭ್ಯರ್ಥಿಗಳು ನಿರಾಳವಾಗಿಯೇ ಇದ್ದರು. ಪತ್ರಿಕೆ, ಸುದ್ದಿವಾಹಿನಿಗಳಲ್ಲಿನ ಚುನಾವಣಾ ಸಮೀಕ್ಷೆ ಗಮನಿಸುವಲ್ಲಿ ಕೆಲವರು ಮಗ್ನರಾಗಿದ್ದರು.</p>.<p>ತುಮಕೂರು ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ರಫೀಕ್ ಅಹಮದ್ ಅವರು ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಮನೆಯಲ್ಲಿ ಕಾಲ ಕಳೆದರು. ಚುನಾವಣೆ ಒತ್ತಡದಿಂದ ಮುಕ್ತರಾಗಿ ಸಂಡೇ ಮೂಡ್ನಲ್ಲಿ ಕಾಲ ಕಳೆದರು.</p>.<p>ಬೆಂಬಲಿಗರು, ಪಕ್ಷದ ಮುಖಂಡರು, ಕಾರ್ಯಕರ್ತರು ಶಾಸಕರ ಮನೆಗೇ ಬಂದು ಶನಿವಾರ ತಮ್ಮ ಪ್ರದೇಶದಲ್ಲಿ ನಡೆದ ಮತದಾನ ಪ್ರಮಾಣದ ಬಗ್ಗೆ ವಿವರಿಸಿದರು. ರಾಜಕೀಯ ಲೆಕ್ಕಾಚಾರದ ಬಗ್ಗೆ ಚರ್ಚೆ ನಡೆಸಿದರು.</p>.<p>ಶಾಸಕರ ಮಾವ ಹಾಗೂ ಕಾಂಗ್ರೆಸ್ ಮುಖಂಡರಾದ ಷಫೀ ಅಹಮದ್ ಅವರೂ ರಫೀಕ್ ಅವರ ಮನೆಗೆ ಬಂದು ಮೇ 15ರಂದು ಬರಲಿರುವ ಫಲಿತಾಂಶದ ಬಗ್ಗೆ ಲೆಕ್ಕಾಚಾರ ಹಾಕಿದರು.</p>.<p>ತಗ್ಗಿದ ಮತದಾನಕ್ಕೆ ಬೇಸರ: ‘ಮತದಾನದ ಬಳಿಕ ಸ್ವಲ್ಪ ಒತ್ತಡ ಕಡಿಮೆಯಾಗಿದೆ. ಮತದಾನ ನಗರದ ಎಲ್ಲ ಕಡೆಶಾಂತಿಯುತವಾಗಿ ನಡೆದಿದ್ದು ಸಂತೋಷವಾಗಿದೆ. ಆದರೆ, ಕಳೆದ ಬಾರಿಗಿಂತ ಕಡಿಮೆ ಮತದಾನ ಆಗಿರುವುದು ಬೇಸರವನ್ನುಂಟು ಮಾಡಿದೆ’ ಎಂದು ಪ್ರಜಾವಾಣಿಗೆ ತಿಳಿಸಿದರು.</p>.<p><strong>ಮದುವೆಗೆ ಹಾಜರ್!</strong></p>.<p>ತುಮಕೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಹಾಗೂ ಶಾಸಕ ಬಿ.ಸುರೇಶ್ಗೌಡ ಅಬರು ಮತದಾನ ಮರುದಿನ ಭಾನುವಾರ ಕ್ಷೇತ್ರದಲ್ಲಿಯೇ ಕಾಲ ಕಳೆದರು.</p>.<p>ನಂದಿಹಳ್ಳಿ, ದಾಸರಹಳ್ಳಿ, ಬೆಳ್ಳಾವಿ ಸೇರಿದಂತೆ 8 ಕಡೆ ಮದುವೆ ಸಮಾರಂಭಗಳಲ್ಲಿ ಪಾಲ್ಗೊಂಡು ವಧುವರರಿಗೆ ಶುಭ ಕೋರಿದರು. ಅಲ್ಲದೇ, ತಮಗೆ ಮತ ಹಾಕಿಸಲು ಶ್ರಮಿಸಿದ ಕ್ಷೇತ್ರದ ಮುಖಂಡರು, ಕಾರ್ಯಕರ್ತರು, ಗ್ರಾಮದ ಮುಖಂಡರ ಮನೆಗಳಿಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದರು. ಕಾಫಿ, ಉಪಾಹಾರ ಸೇವಿಸಿ ರಾಜಕೀಯ ಲೆಕ್ಕಾಚಾರ ನಡೆಸಿದರು.</p>.<p>ಅಲ್ಲದೇ, ಪಕ್ಷದ ಇಬ್ಬರು ಕಾರ್ಯಕರ್ತರ ತಂದೆಯವರು ಮೃತಪಟ್ಟಿದ್ದರಿಂದ ಅಲ್ಲಿಗೂ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದರು.</p>.<p><strong>ಮತದಾನ ಪ್ರಮಾಣ ಹೆಚ್ಚಳಕ್ಕೆ ಸಂತಸ:</strong> ‘ರಾಜಕೀಯ ಎಂಬುದು ಇದ್ದೇ ಇರುತ್ತೆ. ಆದರೆ, ಮತದಾರರು ಮತದಾನಕ್ಕೆ ಉತ್ಸಾಹ ತೋರಿದ್ದು ತುಂಬಾ ಸಂತೋಷವಾಗಿದೆ’ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ತುಮಕೂರು ಗ್ರಾಮಾಂತರದಲ್ಲಿ ಶೇ 85.5 ಮತದಾನ ಆಗಿರುವುದು ಖುಷಿಯಾಗಿದೆ. ಮತವನ್ನು ಯಾವುದೇ ಅಭ್ಯರ್ಥಿಗೆ ಹಾಕಲಿ. ಅದು ಬೇರೆ ವಿಚಾರ. ಆದರೆ, ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರಲ್ಲ ಅದು ಪ್ರಶಂಸನೀಯ’ ಎಂದು ಹೇಳಿದರು.</p>.<p>ತುಮಕೂರು ನಗರ ವಿಧಾನಸಭಾ ಕ್ಷೇತ್ರದವ ಬಿಜೆಪಿ ಅಭ್ಯರ್ಥಿ ಜಿ.ಬಿ.ಜ್ಯೋತಿ ಗಣೇಶ್ ಅವರು ಭಾನುವಾರ ಮನೆಯಲ್ಲಿಯೇ ವಿಶ್ರಾಂತಿ ಪಡೆದು ಕಾಲ ಕಳೆದರು. ಮೊಬೈಲ್ನಲ್ಲಿ ಮತದಾನದ ಲೆಕ್ಕಾಚಾರಗಳ ಬಗ್ಗೆ ಮುಖಂಡರು, ಕಾರ್ಯಕರ್ತರೊಂದಿಗೆ ಚರ್ಚಿಸಿದರು.</p>.<p>ಜೆಡಿಎಸ್ ಅಭ್ಯರ್ಥಿ ಎನ್.ಗೋವಿಂದರಾಜ್ ಅವರೂ ಬೆಳಿಗ್ಗೆ ಯಿಂದ ಮನೆಯಲ್ಲಿ ಕಾಲ ಕಳೆದರು. ಸಂಜೆ ಮನೆಯಿಂದ ಹೊರಬಿದ್ದ ಅವರು ಸ್ನೇಹಿತರು ಮತ್ತು ಬೆಂಬಲಿಗರೊಂದಿಗೆ ತಮಗೆ ಲಭಿಸಬಹುದಾದ ಮತಗಳ ಬಗ್ಗೆ ಚರ್ಚೆ ನಡೆಸಿದರು.</p>.<p><strong>ವಿಶ್ರಾಂತಿ ಪಡೆದ ಅಭ್ಯರ್ಥಿಗಳು</strong></p>.<p><strong>ಪಾವಗಡ:</strong> ಚುನಾವಣೆ ಮುಗಿದ ನಂತರ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಭಾನುವಾರ ಆಪ್ತರು, ಕಾರ್ಯಕರ್ತರೊಂದಿಗೆ ಚರ್ಚೆಯಲ್ಲಿ ತೊಡಗಿದ್ದರು.</p>.<p>ಜೆಡಿಎಸ್ ಅಭ್ಯರ್ಥಿ ಕೆ.ಎಂ.ತಿಮ್ಮರಾಯಪ್ಪ ಸ್ವಗ್ರಾಮ ಕೆ.ಟಿ.ಹಳ್ಳಿ ಮನೆಯಲ್ಲಿ ಕಾರ್ಯಕರ್ತರೊಂದಿಗೆ ಚುನಾವಣೆ ಕುರಿತು ಸಮಾಲೋಚನೆ ನಡೆಸಿದರು. ಕೆಲಕಾಲ ಕುಟುಂಬ ಸದಸ್ಯರೊಡನೆ ವಿಶ್ರಾಂತಿ ಪಡೆದರು.</p>.<p>ಕಾಂಗ್ರೆಸ್ ಅಭ್ಯರ್ಥಿ ವೆಂಕಟರವಣಪ್ಪ ಹನುಮಂತನಹಳ್ಳಿ ತೋಟದ ಮನೆಯಲ್ಲಿ ಬೆಳಿಗ್ಗೆಯಿಂದಲೇ ವಿಶ್ರಾಂತಿ ಪಡೆದರು. ನಂತರ ಮುಖಂಡರೊಂದಿಗೆ ಚುನಾವಣೆ ಬಗ್ಗೆ ಚರ್ಚೆ ನಡೆಸಿದರು.</p>.<p>ಬಿಜೆಪಿ ಅಭ್ಯರ್ಥಿ ಜಿ.ವಿ.ಬಲರಾಂ ಅವರು ಗುಜ್ಜನಡು ಗ್ರಾಮದ ಮನೆಯಲ್ಲಿ ಕುಟುಂಬ ಸದಸ್ಯರೊಡನೆ ಕಾಲ ಕಳೆದರು. ಪಕ್ಷದ ಪ್ರಮುಖರೊಂದಿಗೆ ಕೆಲಕಾಲ ಮಾತುಕಥೆ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>