‘ನನ್ನ ಹೆಸರು ಕೊಲೆ ಆರೋಪದಲ್ಲಿ ಕೇಳಿ ಬಂದಿದೆ. ತುಮಕೂರು ಪೊಲೀಸರು ಎನ್ಕೌಂಟರ್ ಮಾಡುತ್ತಾರೆ ಎನ್ನುವ ಭಯದಿಂದ ನಾನು ಇಲ್ಲಿಗೆ ಬಂದು ಶರಣಾಗಿದ್ದೇನೆ. ಉಳಿದದ್ದು ನ್ಯಾಯಾಲಯದಲ್ಲಿ ನಿರ್ಧಾರವಾಗಲಿದೆ. ನನ್ನ ತುಮಕೂರಿಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಎನ್ಕೌಂಟ್ ಆದರೂ ಆಗಬಹುದು’ ಎಂದು ಪೊಲೀಸ್ ಠಾಣೆ ಬಳಿ ಸುಜಯ್ ಭಾರ್ಗವ್ ಮಾತನಾಡಿದ್ದಾರೆ. ಸುಜಯ್ ಭಾರ್ಗವ್ ಹೆಸರು ಹೊಸ ಬಡಾವಣೆ ಪೊಲೀಸ್ ಠಾಣೆಯ ರೌಡಿ ಶೀಟರ್ ಪಟ್ಟಿಯಲ್ಲಿ ಇತ್ತು.