‘ನಿಮಗೆ ಶಿವ, ಸುರೇಶ ಎಂಬ ಹೆಸರಿಟ್ಟಿದ್ದಾರೆ. ನಿಮ್ಮ ಮಕ್ಕಳು ಕೃಷ್ಣ, ಮಾಧವ ಆಗಬೇಕೇ ಹೊರತು ಮಹಮ್ಮದ್ ಅಲ್ಲ. ಮಕ್ಕಳು, ಮೊಮ್ಮಕ್ಕಳು ಕೂತು ತಿಂದರೂ ಕರಗದಷ್ಟು ಆಸ್ತಿ ಮಾಡಿದ್ದೀರಿ. ಅದರಲ್ಲಿ ಸರ್ಕಾರ ಹಿಡಿದದ್ದು ಅತ್ಯಲ್ಪ. ಇನ್ನಾದರೂ ಧರ್ಮ ವಿರೋಧಿ ಬುದ್ಧಿ ಬಿಡಿ. ಹಿಂದಿನ ಸರ್ಕಾರದಲ್ಲಿ ಮಂತ್ರಿ ಆಗಿದ್ದವರು ಇಂದು ಕಂತ್ರಿ ಆಗಿದ್ದಾರೆ. ಮುಂದೆಮುನೇಶ್ವರದ ಪಾದತಲದಲ್ಲಿ ನಿಮ್ಮ ತಲೆ ಇಡುವ ದಿನ ಬರುತ್ತದೆ. ಇಂದು ನಿಮ್ಮದೇ ಕ್ಷೇತ್ರದಲ್ಲಿ ನಿಮ್ಮ ಜನರೇ ಧ್ವನಿ ಎತ್ತಿರುವುದು ಅದಕ್ಕೆ ಸಾಕ್ಷಿ' ಎಂದು ಕಿಡಿಕಾರಿದರು.