ಬೆಂಗಳೂರು: ಹಾಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆರು ವರ್ಷ ನೆಲೆಸಿದ್ದ ಸರ್ಕಾರಿ ವಸತಿ ಗೃಹ ‘ಕಾವೇರಿ’ ಕೊನೆಗೂ ಅವರ ಕೈತಪ್ಪಿದೆ.
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಹಂಚಿಕೆ ಮಾಡಿದ್ದಕುಮಾರಕೃಪಾ ಪೂರ್ವದ ನಂ. 1 ಬಂಗಲೆಯನ್ನು ಸಿದ್ದರಾಮಯ್ಯ ಅವರಿಗೆ ಮರುಹಂಚಿಕೆ ಮಾಡಲಾಗಿದೆ.
ಇದಕ್ಕೆ ಮೊದಲು ಸಿದ್ದರಾಮಯ್ಯ ಅವರಿಗೆ ಹಂಚಿಕೆ ಮಾಡಲಾಗಿದ್ದರೇಸ್ಕೋರ್ಸ್ ರಸ್ತೆಯ ನಂ.2, ರೇಸ್ ವ್ಯೂ ಬಂಗಲೆಯನ್ನು ಕಾಗೇರಿ ಅವರಿಗೆ ಕೊಡಲಾಗಿದೆ.
ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕುಮಾರಕೃಪಾ ರಸ್ತೆಯಲ್ಲಿರುವ ‘ಕಾವೇರಿ’ಯನ್ನು ಸಿದ್ದರಾಮಯ್ಯ ತಮಗೆ ಹಂಚಿಕೆ ಮಾಡಿಸಿಕೊಂಡಿದ್ದರು. ಮೈತ್ರಿ ಸರ್ಕಾರ ಬಂದ ಬಳಿಕ, ಆಗ ಸಚಿವರಾಗಿದ್ದ ಕೆ.ಜೆ. ಜಾರ್ಜ್ ಹೆಸರಿಗೆ ಹಂಚಿಕೆ ಮಾಡಿಸಿಕೊಂಡು ಆ ವಸತಿಗೃಹದಲ್ಲೇ ವಾಸ್ತವ್ಯ ಮುಂದುವರಿಸಿದ್ದರು.
ಬಿಜೆಪಿ ಸರ್ಕಾರ ಬಂದ ಬಳಿಕ ‘ಕಾವೇರಿ’ಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮಗೆ ಹಂಚಿಕೆ ಮಾಡಿಸಿಕೊಂಡಿದ್ದರು. ರೇಸ್ ವ್ಯೂ–2 ಬಂಗಲೆಯನ್ನು ಸಿದ್ದರಾಮಯ್ಯಗೆ ಹಂಚಿಕೆ ಮಾಡಿಸಿದ್ದರು. ಇದರಿಂದಾಗಿ, ‘ಕಾವೇರಿ’ ತೊರೆಯುವ ಅನಿವಾರ್ಯ ಅವರಿಗೆ ಸೃಷ್ಟಿಯಾಗಿತ್ತು.
ಕುಮಾರ ಕೃಪಾ–1 ಅನ್ನು ತಮಗೆ ಹಂಚಿಕೆ ಮಾಡುವಂತೆ ಸಿದ್ದರಾಮಯ್ಯ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು.