ಸಾಗರ ತಾಲ್ಲೂಕಿನ ತಾಳಗುಪ್ಪದಲ್ಲಿ ಗಾಳಿ ಸಹಿತ ಮಳೆಗೆ ಮರ, ವಿದ್ಯುತ್ ಕಂಬ ಬಿದ್ದಿದ್ದು, ತೆರವುಗೊಳಿಸಲಾಯಿತು. ಸಿಗಂದೂರು–ಹೊಳೆಬಾಗಿಲು ಮಧ್ಯೆ ಜೋರು ಮಳೆ, ಗಾಳಿಗೆ ಮರ ಬಿದ್ದುರಸ್ತೆ ವಿಭಜಕಕೊಂಚ ಮುರಿದಿದ್ದು,ಒಂದು ಗಂಟೆ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಪ್ರವಾಸಿಗರು ಮರ ತೆರವುಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಉಳ್ಳೂರಿನಲ್ಲಿ ಸಾಧಾರಣ ಮಳೆಯಾಗಿದೆ.