‘ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಪಂಗಡವು ಶೇ 7.5ರಷ್ಟು ಮೀಸಲಾತಿ ಪಡೆಯುವುದು ಸಂವಿಧಾನದತ್ತ ಹಕ್ಕು. ಅದು ಭಿಕ್ಷೆಯಲ್ಲ. ಮೀಸಲಾತಿ ಹೆಚ್ಚಳಕ್ಕಾಗಿ ಇತ್ತೀಚೆಗೆ ನಡೆದ ಪಾದಯಾತ್ರೆಯಲ್ಲಿ ಬಹುಮಂದಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಇನ್ನು ಹೆಚ್ಚಿನ ಜನರು ಸೇರಿ, ಮತ್ತಷ್ಟು ಪ್ರಚಾರ ದೊರೆತಿದ್ದರೆ ಒಳ್ಳೆಯದಿತ್ತು. ಹೋರಾಟದ ನೇತೃತ್ವವಹಿಸಿದ್ದ ಪ್ರಸನ್ನಾನಂದ ಸ್ವಾಮೀಜಿ ಹಾಗೂ ಬೆಂಬಲಿಸಿದ ಮಠಾಧೀಶರಿಗೆ ತುಮಕೂರಿನಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಿ ಸನ್ಮಾನಿಸಲಾಗುವುದು’ ಎಂದು ತಿಳಿಸಿದರು.