ನೀಲಕಂಠರಾಯನಗಡ್ಡಿ (ನಡುಗಡ್ಡಿ)ಯ ನಿವಾಸಿಗಳಿಗೆ ಕೃಷ್ಣಾ ನದಿ ದಾಟುವುದು ದೊಡ್ಡ ಸಮಸ್ಯೆಯಾಗಿದೆ. ಪ್ರತಿ ವರ್ಷ ಕೃಷ್ಣಾ ನದಿಗೆ ಪ್ರವಾಹ ಬಂದಾಗ, ನೀಲಕಂಠರಾಯನಗಡ್ಡಿಯ ಜನ ಹೊರ ಜಗತ್ತಿನ ಸಂಪರ್ಕ ಕಳೆದುಕೊಳ್ಳುತ್ತಾರೆ. ಪ್ರವಾಹ ತಗ್ಗುವವರೆಗೆ ಅಲ್ಲಿಯ ಜನ ಅನಾರೋಗ್ಯ, ಆಹಾರ ಕೊರತೆ ಸೇರಿದಂತೆ ವಿವಿಧ ಸಮಸ್ಯೆಗಳ ಸುಳಿಗೆ ಸಿಲುಕುತ್ತಾರೆ.