ಬೆಂಗಳೂರು: ‘ಶತಮಾನಗಳಿಂದ ವೃತ್ತಿ ಮೌಲ್ಯ ಕಾಪಾಡಿಕೊಂಡು ತನ್ನದೇ ಆದ ಸಂಸ್ಕೃತಿಯನ್ನು ತಲೆಮಾರಿನಿಂದ ತಲೆಮಾರಿಗೆ ವೃದ್ಧಿಸಿಕೊಂಡು ಬೆಳೆದಿರುವ ವಕೀಲಿಕೆ ಅತ್ಯಂತ ಶ್ರೇಷ್ಠವಾದದ್ದು, ಇಂತಹ ವೃತ್ತಿಯ ಗೌರವವನ್ನು ಎತ್ತಿ ಹಿಡಿಯಬೇಕಾದ ವಕೀಲರು, ಯಾವ ಕಕ್ಷಿದಾರರ ಪರ ವಾದ ಮಂಡಿಸಿ ಆ ವ್ಯಾಜ್ಯದಿಂದ ನಿವೃತ್ತರಾಗಿರುತ್ತಾರೊ ಅದೇ ಪ್ರಕರಣದಲ್ಲಿ ಅದೇ ಕಕ್ಷಿದಾರರ ಏಜೆಂಟ್ ಆಗಿ ಕೋರ್ಟ್ಗೆ ಸಾಕ್ಷ್ಯ ನುಡಿಯುವುದು ಸಲ್ಲ’ ಎಂದು ಹೈಕೋರ್ಟ್ ಹೇಳಿದೆ.