ಕಲಬುರ್ಗಿ: ‘ಕಲಬುರ್ಗಿ ನನ್ನ ಕರ್ಮಭೂಮಿ. ಇಲ್ಲಿನ ಜನ ನನ್ನನ್ನು 11 ಬಾರಿ ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಅವರನ್ನು ಬಿಟ್ಟು ನಾನು ಬೇರೆ ಕಡೆ ಹೋಗುವ ಪ್ರಶ್ನೆಯೇ ಇಲ್ಲ’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆಸ್ಪಷ್ಟಪಡಿಸಿದರು.
‘ಕೋಲಾರದಿಂದ ಸ್ಪರ್ಧಿಸುತ್ತೀರಾ’ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನನ್ನ ದೇವರು ಇಲ್ಲಿಯೇ ಇದ್ದಾರೆ. ನಾನು ಇಲ್ಲಿಯೇ ಸ್ಪರ್ಧೆ ಮಾಡುತ್ತೇನೆ. ಇಲ್ಲಿನ ಜನ ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದರು.