‘ಸಾಕಷ್ಟು ಹಿಂದೆಯೇ ಖರ್ಗೆ ಮುಖ್ಯಮಂತ್ರಿ ಆಗಬೇಕಿತ್ತು‘ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು. ಇದಕ್ಕೆ ಟ್ವೀಟ್ ಮಾಡಿದ್ದ ಸಿದ್ದರಾಮಯ್ಯ, ‘ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಆಗಲು ಸಾಕಷ್ಟು ಮಂದಿ ಸಮರ್ಥರು ಇದ್ದಾರೆ. ಜೆಡಿಎಸ್ನಲ್ಲೂ ಎಚ್.ಡಿ.ರೇವಣ್ಣ (ಕುಮಾರಸ್ವಾಮಿ ಸಹೋದರ) ಅವರಂಥವರು ಇದ್ದಾರೆ’ ಎಂದು ಹೇಳಿದ್ದರು. ಸಿದ್ದರಾಮಯ್ಯ ಮಾತು ಗಮನಿಸಿದರೆ, ಕುಮಾರಸ್ವಾಮಿ ಹೇಳಿಕೆಯಿಂದ ಹತಾಶರಾದಂತೆ ಕಾಣುತ್ತಾರೆ ಎಂದು ಟೀಕಿಸಿದ್ದಾರೆ.