ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲಯ್ಯನ ಪಲ್ಲಕ್ಕಿ ಉತ್ಸವಕ್ಕೆ ಜನಸಾಗರ; ನಿಷೇಧದ ನಡುವೆಯೂ ಕುರಿ ಹಾರಿಸಿದ ಭಕ್ತರು

Last Updated 14 ಜನವರಿ 2020, 20:00 IST
ಅಕ್ಷರ ಗಾತ್ರ

ಯಾದಗಿರಿ: ತಾಲ್ಲೂಕಿನ ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರ ಪಲ್ಲಕ್ಕಿ ಉತ್ಸವ ಮಂಗಳವಾರ ಅಪಾರ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಿಂದ ಜರುಗಿತು.

ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ರಥೋತ್ಸವದ ಬದಲು ಕಬ್ಬಿಣದ ಸರಪಳಿ ಹರಿಯಲಾಯಿತು. ಸರಪಳಿ ಹರಿಯುವ ದೃಶ್ಯ ನೋಡಲು ಅಪಾರ ಭಕ್ತ ಸಮೂಹ ನೆರೆದಿತ್ತು.

ಲಕ್ಷಾಂತರ ಭಕ್ತರು ಏಳು ಕೋಟಿ ಏಳು ಕೋಟ್ಯೋ... ಎಂಬ ಜಯ ಘೋಷದೊಂದಿಗೆ ಮಲ್ಲಯ್ಯನಿಗೆ ಪ್ರಿಯವಾದ ಭಂಡಾರ, ಕುರಿ ಉಣ್ಣೆ, ಒಂದು, ಎರಡು ರೂಪಾಯಿ ನಾಣ್ಯ ಹಾಗೂ ತಮ್ಮ ಜಮೀನಿನಲ್ಲಿ ಬೆಳೆದ ಜೋಳ, ಶೇಂಗಾ, ಛತ್ರಿ ಎಸೆದು ಭಕ್ತಿಭಾವ ಮೆರೆದರು.

ಕುರಿಮರಿ ತೂರಿದರು: ಜಿಲ್ಲಾಡಳಿತದ ಕಟ್ಟುನಿಟ್ಟಿನ ಆದೇಶದ ನಡುವೆಯೂ ಮೂರು ಕುರಿಮರಿಗಳನ್ನು ಭಕ್ತರು ಪಲ್ಲಕ್ಕಿ ಮೇಲೆ ಹಾರಿಸಿದ್ದಾರೆ. ಪಲ್ಲಕ್ಕಿ ಮೇಲೆ ಕುರಿ ಹಾರಿಸುವುದು ನಿಷೇಧ. ಹಾರಿಸಿದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಧ್ವನಿವರ್ಧಕದಲ್ಲಿ ಪೊಲೀಸರು ಹೇಳು
ತ್ತಿದ್ದರು.‌ಆದರೂ, ಭಕ್ತರು ಅದನ್ನು ಲೆಕ್ಕಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT